ತಿಪಟೂರು ರಸ್ತೆಯ ಪಂಚಮುಖಿ ಆಂಜನೇಯ ಸ್ವಾಮಿ ದೇಗುಲದಲ್ಲೂ ಭಕ್ತರಿಂದ ವಿಶೇಷ ಅಲಂಕಾರ, ಪೂಜೆ ನೆರವೇರಿತು. ದೇವಾಂಗ ಬೀದಿಯ ಬನಶಂಕರಿ ದೇವಾಲಯದಲ್ಲಿ ಶ್ರೀರಾಮನ ಚಿತ್ರಪಟವಿಟ್ಟು ಏಳು ದಿನಗಳ ಕಾಲ ಅಖಂಡ ಭಜನೆ ಆರಂಭವಾಯಿತು. ಭಜನೆ ಮಾಡುವವರಿಗೆ ದೇವಾಲಯದಲ್ಲಿ ದಾಸೋಹದ ವ್ಯವಸ್ಥೆ ಮಾಡಲಾಗಿದೆ. ಸಂಜೆ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಲಿವೆ. ಪಟ್ಟಣದ ನೆಹರೂ ವೃತ್ತದಲ್ಲಿ ವಿಶ್ವ ಹಿಂದೂ ಪರಿಷತ್ನಿಂದ ಹಾಗೂ ಕೆಎಸ್ಆರ್ಟಿಸಿ ಬಸ್ ನಿಲ್ದಾಣದ ಮುಂಭಾಗ ಮಾರುತಿ ಆಟೊ ಚಾಲಕರ ಸಂಘದಿಂದ ಪಾನಕ ವಿತರಿಸಲಾಯಿತು.