ಮುಖ್ಯಾಧಿಕಾರಿ ಅವರು ವಾಟ್ಸ್ಆ್ಯಪ್ನಲ್ಲಿ ಬೇಕಾಬಿಟ್ಟಿಯಾಗಿ ಪ್ರತಿಕ್ರಿಯೆ ನೀಡುತ್ತಾರೆ. ಸದಸ್ಯರಿಗೆ ಗೌರವ ನೀಡುವುದಿಲ್ಲ. ಖರ್ಚು, ಕಾಮಗಾರಿ ಇತ್ಯಾದಿ ಬಗ್ಗೆ ಕೇಳಿದರೂ ಸಮರ್ಪಕವಾಗಿ ಉತ್ತರ ನೀಡುವುದಿಲ್ಲ ಎಂದು ನಾಮ ನಿರ್ದೇಶಿತ ಸದಸ್ಯರಾದ ಲೋಕೇಶ್ ದೇವರಾಜು, ಪ್ರಸನ್ನ, ರವಿ, ಶೇಖರ್ ಬಾಬು, ಮಂಜುನಾಥ್ ಆರೋಪಿಸಿದರು.