ಸಂಸದ ಜಿಎಸ್ ಬಸವರಾಜು ಮಾತನಾಡಿ, ಪಟ್ಟಣದಲ್ಲಿ ನಿರ್ಮಿಸಿರುವ ರೈಲ್ವೆ ಕೆಳಸೇತುವೆ ತುಂಬಾ ಅನಾನುಕೂಲಕರವಾಗಿದೆ. ಇದಕ್ಕೆ ಬದಲಾಗಿ ಮೇಲ್ಸೇತುವೆ ನಿರ್ಮಾಣಕ್ಕೆ ಕ್ರಮ ಕೈಗೊಳ್ಳಲಾಗುತ್ತಿದೆ. ತುಮಕೂರಿನವರೆಗೂ ಇರುವ ಎಲೆಕ್ಟ್ರಿಕ್ ರೈಲಿನ ಸೌಲಭ್ಯವನ್ನು ಅರಸೀಕೆರೆವರಗೆ ವಿಸ್ತರಿಸುವಂತೆ ಮನವಿ ಮಾಡಲಾಗುವುದು. ಚಳ್ಳಕೆರೆ, ಹಿರಿಯೂರು, ಚಿಕ್ಕನಾಯಕನಹಳ್ಳಿ, ತುರುವೇಕೆರೆ ಮೂಲಕ ಮಂಗಳೂರು ಟ್ರ್ಯಾಕ್ಗೆ ಲಿಂಕ್ ಕಲ್ಪಿಸುವ ಯೋಜನೆ ಅನುಷ್ಠಾನಕ್ಕೆ ತರುವಂತೆ ಕೇಂದ್ರ ಸರ್ಕಾರವನ್ನು ಒತ್ತಾಯಿಸಲಾಗುವುದು. ತುಮಕೂರಿನಿಂದ ಕುಣಿಗಲ್ ಮೂಲಕ ಮದ್ದೂರು, ಮಂಡ್ಯ ರೈಲ್ವೆ ಹಳಿ ನಿರ್ಮಾಣವಾದರೆ ಅನುಕೂಲವಾಗುತ್ತದೆ ಎಂದರು.