ಅಮರೇಶ್ವರ ವಿಜಯ ನಾಟಕ ಮಂಡಲಿಯ ಮಾಲೀಕರಾದ ರಂಗತಜ್ಞ, ಕಲಾರತ್ನ ಚನ್ನಸಬಯ್ಯಗುಬ್ಬಿ ಅವರು ರಂಗಭೂಮಿಯ ಹವ್ಯಾಸಿ ನಟ ಎಂ.ಶ್ರೀನಿವಾಸ್ ಅವರಿಗೆ ಶಾಲು ಹೊದಿಸಿ, ಮೈಸೂರು ಪೇಟ ಧರಿಸಿ ಡಾ.ರಾಜ್ಕುಮಾರ್ ಪ್ರಶಸ್ತಿಯನ್ನು ಪ್ರದಾನ ಮಾಡಿದರು. ರೈತ, ಸೈನಿಕರಂತೆಯೇ ಕಲಾವಿದರೂ ಕೂಡ ನಾಡಭಟರು. ಕಲಾವಿದರ ಪೋಷಣೆಗೆ ಸರ್ಕಾರ ಮುಂದಾಗಬೇಕು ಎಂದು ಕರೆ ನೀಡಿದರು.