‘ಭಾರತದ ಕೋಳಿ ಸಾಕಣೆ ಉದ್ಯಮದಲ್ಲಿ ಪ್ರತಿಜೀವಕಗಳ ಬಳಕೆ ವಿಧಾನವನ್ನು ಅಳವಡಿಸಿಕೊಳ್ಳಲಾಗಿದೆ. ಕೋಳಿಗಳು ದಷ್ಟಪುಷ್ಟವಾಗಿ ಬೆಳೆಯಬೇಕೆಂದು ಜೀವ ಉಳಿಸಲು ಬಳಸುವ ಕೊಲಿಸ್ಟಿನ್ನಂಥ ಔಷಧಗಳನ್ನೂ ಬಳಸಲಾಗುತ್ತಿದೆ. ಇದನ್ನು ತಗ್ಗಿಸಲು ಉದ್ಯಮದ ಪ್ರಾಮಾಣಿಕ ಪ್ರಯತ್ನ ಕಾಣುತ್ತಿಲ್ಲ’ ಎಂದು ಸಿಎಸ್ಇ ಉಪ ಪ್ರಧಾನ ನಿರ್ದೇಶಕ ಚಂದ್ರ ಭೂಷಣ್ ಹೇಳಿದ್ದಾರೆ.