ಇದೇ 19ರಂದು ಕಾಂಗ್ರೆಸ್ ಮುಖಂಡ ಹಾಲುವಾಗಿಲು ಸ್ವಾಮಿ, ತಮ್ಮ ಫೇಸ್ಬುಕ್ ಖಾತೆಯಲ್ಲಿ ವಕೀಲರ ಕುರಿತು ಅವಹೇಳನ ಬರಹ ಪ್ರಕಟಿಸಿದ್ದರು. ಇದರಿಂದ ಆವೇಶಗೊಂಡ ವಕೀಲರ ವೃಂದದವರ ಮನವಿ ಮೇರೆಗೆ ವಕೀಲರ ಸಂಘದ ಅಧ್ಯಕ್ಷ ದಯಾನಂದ್ ಅಧ್ಯಕ್ಷತೆಯಲ್ಲಿ ಭಾನುವಾರ ತುರ್ತು ಸಭೆ ನಡೆಸಿ, ಹಾಲುವಾಗಿಲು ಸ್ವಾಮಿ ವಿರುದ್ಧ ಕುಣಿಗಲ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಲಾಗಿತ್ತು.