ಕಳದ ಬಾರಿಯ ಕೂಟದಲ್ಲಿ ಕಂಚಿನ ಪದಕ ಗೆದ್ದಿದ್ದ ಸರಿತಾ ದೇವಿ ಅವರಿಗೆ ಪ್ರಿ ಕ್ವಾರ್ಟರ್ ಫೈನಲ್ಗೆ ಬೈ ಸಿಕ್ಕಿತ್ತು. ಶನಿವಾರ ಆರಂಭದಿಂದಲೇ ಎದುರಾಳಿ, ಬಾರ್ಬಡೀಸ್ನ ಕಿಂಬರ್ಲಿ ಗಿಟನ್ಸ್ ಮೇಲೆ ಆಧಿಪತ್ಯ ಸ್ಥಾಪಿಸಿದ ಅವರು ಸುಲಭವಾಗಿ ಗೆದ್ದರು. ಸಂಜೆ ನಡೆದ ಸ್ಪರ್ಧೆಯಲ್ಲಿ ಹುಸಾಮುದ್ದೀನ್ ವನ್ವಾಟುವಿನ ಬೋಯೆ ವರವರ ಅವರನ್ನು ಮಣಿಸಿದರು. ತಾಂಜಾನಿಯಾದ ಮುಂಡ್ವಿಕೆ ಎದುರು ಮನೋಜ್ ಕುಮಾರ್ ಸುಲಭವಾಗಿ ಗೆಲುವು ಸಾಧಿಸಿದರು.