ಬುಧವಾರ, 4 ಅಕ್ಟೋಬರ್ 2023
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ತುಮಕೂರು: ಏಲಕ್ಕಿ ಬಾಳೆಹಣ್ಣು ಕೆ.ಜಿ 130!

ಟೊಮೆಟೊ ಕೇಳುವವರಿಲ್ಲ, ತರಕಾರಿ ಬೆಲೆ ಇಳಿಕೆ
Published 16 ಸೆಪ್ಟೆಂಬರ್ 2023, 15:43 IST
Last Updated 16 ಸೆಪ್ಟೆಂಬರ್ 2023, 15:43 IST
ಅಕ್ಷರ ಗಾತ್ರ

ತುಮಕೂರು: ಗೌರಿ, ಗಣೇಶ ಹಬ್ಬ ಆಚರಣೆಗೆ ಜನರು ಸಿದ್ಧತೆಗಳಲ್ಲಿ ತೊಡಗಿದ್ದು, ಹಣ್ಣುಗಳ ದರ ದುಬಾರಿಯಾಗಿದ್ದು, ಅದರಲ್ಲೂ ಏಲಕ್ಕಿ ಬಾಳೆಹಣ್ಣು ಕೆ.ಜಿ ₹130ಕ್ಕೆ ಏರಿಕೆಯಾಗಿದೆ. ತರಕಾರಿ ಬೆಲೆ ಇಳಿಕೆಯಾಗಿದ್ದರೆ, ಕೋಳಿ ಮಾಂಸದ ದರ ಏರಿಕೆ ಕಂಡಿದೆ.

ಬೀನ್ಸ್ ಇಳಿಕೆ: ಕಳೆದ ವಾರ ಏರಿಕೆಯತ್ತ ಮುಖ ಮಾಡಿದ್ದ ಬೀನ್ಸ್ ಧಾರಣೆ ಈ ವಾರ ಕೆ.ಜಿಗೆ ₹10 ಕಡಿಮೆಯಾಗಿದೆ. ಆಲೂಗಡ್ಡೆ, ನುಗ್ಗೇಕಾಯಿ ಸೇರಿದಂತೆ ಕೆಲವು ತರಕಾರಿಗಳ ಬೆಲೆ ಇಳಿಕೆಯಾಗಿದ್ದು, ಗೆಡ್ಡೆಕೋಸು, ಹೂ ಕೋಸು, ತೊಂಡೆಕಾಯಿ, ಹಾಗಲಕಾಯಿ ಸ್ವಲ್ಪ ಮಟ್ಟಿಗೆ ದುಬಾರಿಯಾಗಿದೆ. ಉಳಿದಂತೆ ತರಕಾರಿಗಳ ಬೆಲೆಯಲ್ಲಿ ಹೆಚ್ಚಿನ ವ್ಯತ್ಯಾಸವಾಗಿಲ್ಲ. ಹಬ್ಬದ ಸಮಯದಲ್ಲಿ ತರಕಾರಿಗೆ ಉತ್ತಮ ಬೆಲೆ ಸಿಗಬಹುದು ಎಂದು ನಿರೀಕ್ಷಿಸಿದ್ದ ರೈತರಿಗೆ ನಿರಾಶೆಯಾಗಿದೆ.

ಮಾರುಕಟ್ಟೆಯಲ್ಲಿ ಟೊಮೆಟೊ ಕೇಳುವವರೇ ಇಲ್ಲವಾಗಿದ್ದು, ಕೆ.ಜಿ ₹10–15ಕ್ಕೆ ಕುಸಿದಿದೆ. ರೈತರಿಗೆ ಕೆ.ಜಿಗೆ ₹5–6 ಸಿಗುತ್ತಿಲ್ಲ. ಕೂಲಿಕೊಟ್ಟು ಗಿಡದಿಂದ ಹಣ್ಣು ಕೀಳಿಸಿ, ಮಾರುಕಟ್ಟೆಗೆ ಸಾಗಣೆ ಮಾಡಿದ ವೆಚ್ಚವೂ ಬರುತ್ತಿಲ್ಲ. ಬೆಲೆ ಕುಸಿತದಿಂದ ಕಂಗಾಲಾಗಿರುವ ರೈತರು, ಜಮೀನಿನಲ್ಲಿ ಟೊಮೆಟೊ ಕೀಳಿಸುವುದನ್ನೇ ಕೈಬಿಟ್ಟಿದ್ದಾರೆ. ಗಿಡಗಳ ನಿರ್ವಹಣೆಯನ್ನೂ ಮಾಡುತ್ತಿಲ್ಲ.

ಸೊಪ್ಪಿಗೆ ಬೇಡಿಕೆ: ಮಾರುಕಟ್ಟೆಯಲ್ಲಿ ಸೊಪ್ಪಿಗೆ ಬೇಡಿಕೆ ಹೆಚ್ಚಾಗಿದ್ದು, ಬೆಲೆಯೂ ಏರುತ್ತಲೇ ಸಾಗುತ್ತಿದೆ. ಮಳೆ ಇಲ್ಲದೆ ಬರ ಆವರಿಸಿದ್ದು, ಸೊಪ್ಪು ಬೆಳೆಯಲು ನೀರಿನ ಕೊರತೆ ಎದುರಾಗಿದೆ. ಹಾಗಾಗಿ ಮಾರುಕಟ್ಟೆಯಲ್ಲಿ ಆವಕ ಕಡಿಮೆಯಾಗುತ್ತಿದೆ. ಕೊತ್ತಂಬರಿ ಸೊಪ್ಪು ಕೆ.ಜಿ ₹40–50, ಸಬ್ಬಕ್ಕಿ ಕೆ.ಜಿ ₹50–60, ಮೆಂತ್ಯ ಸೊಪ್ಪು ಕೆ.ಜಿ ₹40–50, ಪಾಲಕ್ ಸೊಪ್ಪು (ಕಟ್ಟು) ₹30ಕ್ಕೆ ಮಾರಾಟವಾಗುತ್ತಿದೆ.

ಬಾಳೆ ಹಣ್ಣು ಮತ್ತಷ್ಟು ದುಬಾರಿ: ವರಮಹಾಲಕ್ಷ್ಮಿ ಹಬ್ಬದ ವೇಳೆಗೆ ದುಬಾರಿಯಾಗಿದ್ದ ಏಲಕ್ಕಿ ಬಾಳೆಹಣ್ಣು, ನಂತರ ಸ್ವಲ್ಪ ಮಟ್ಟಿಗೆ ಕಡಿಮೆಯಾಗಿದ್ದರೆ, ಗೌರಿ, ಗಣೇಶ ಹಬ್ಬದ ವೇಳೆಗೆ ಮತ್ತಷ್ಟು ಏರಿಕೆ ಕಂಡಿದೆ. ಒಂದು ಕೆ.ಜಿ ₹130ಕ್ಕೆ ತಲುಪಿದ್ದು, ದಾಖಲೆ ಬೆಲೆ ಸಿಕ್ಕಿದೆ ಎಂದು ಹೇಳಲಾಗುತ್ತಿದೆ. ಹಬ್ಬದ ವೇಳೆಗೆ ಮತ್ತಷ್ಟು ದುಬಾರಿಯಾಗಬಹುದು.

ಬರ, ನೀರಿನ ಕೊರತೆಯಿಂದಾಗಿ ಸಾಕಷ್ಟು ಕಡೆಗಳಲ್ಲಿ ಬಾಳೆ ಬೆಳೆ ಹಾಳಾಗಿದೆ. ಇರುವ ಬೆಳೆಯನ್ನು ಉಳಿಸಿಕೊಳ್ಳುವುದು ಕಷ್ಟಕರವಾಗಿದ್ದು, ಹೊಸದಾಗಿ ಬಾಳೆಯನ್ನು ನಾಟಿ ಮಾಡುತ್ತಿಲ್ಲ. ತಮಿಳುನಾಡು ಭಾಗದಿಂದಲೂ ಹಣ್ಣು ಬರುವುದು ಕಡಿಮೆಯಾಗಿದ್ದು, ಬೆಲೆ ಹೆಚ್ಚಳಕ್ಕೆ ಕಾರಣವಾಗಿದೆ.

ಅಡುಗೆ ಎಣ್ಣೆ ಅಲ್ಪ ಇಳಿಕೆ: ಅಡುಗೆ ಎಣ್ಣೆ ಧಾರಣೆ ಸ್ವಲ್ಪ ಮಟ್ಟಿಗೆ ಕಡಿಮೆಯಾಗಿದ್ದು, ಕಡಲೆಕಾಯಿ ಎಣ್ಣೆ ಅಲ್ಪ ಹೆಚ್ಚಳವಾಗಿದೆ. ಗೋಲ್ಡ್‌ವಿನ್ನರ್ ಕೆ.ಜಿ ₹108–110, ಪಾಮಾಯಿಲ್ ಕೆ.ಜಿ ₹85, ಕಡಲೆಕಾಯಿ ಎಣ್ಣೆ ಕೆ.ಜಿ ₹156–160ಕ್ಕೆ ಮಂಡಿಪೇಟೆ ಮಾರುಕಟ್ಟೆಯಲ್ಲಿ ಮಾರಾಟವಾಗುತ್ತಿದೆ.

ಉದ್ದು, ಹೆಸರು ದುಬಾರಿ: ಉದ್ದಿನ ಬೇಳೆ, ಹೆಸರು ಕಾಳು, ಬಟಾಣಿ ಧಾರಣೆ ಮತ್ತೆ ಹೆಚ್ಚಳವಾಗಿದೆ. ಕಡಲೆ ಬೀಜ ಏರಿಕೆಯತ್ತಲೇ ಸಾಗಿದ್ದು, ಕೆ.ಜಿ ₹150ರ ಸಮೀಪಕ್ಕೆ ಬಂದಿದೆ. ಅಲಸಂದೆ, ಅವರೆಕಾಳು ದರ ಅಲ್ಪ ಪ್ರಮಾಣದಲ್ಲಿ ಕಡಿಮೆಯಾಗಿದೆ.

ಮೆಣಸು ಏರಿಕೆ: ಹಿಂದಿನ ವಾರ ಇಳಿಕೆ ಕಂಡಿದ್ದ ಕಾಳುಮೆಣಸು ಮತ್ತೆ ಕೆ.ಜಿಗೆ ₹80–100 ಏರಿಕೆಯಾಗಿದ್ದು, ಜೀರಿಗೆ ದರ ಕೆ.ಜಿಗೆ ₹20ಕ್ಕೆ ಹೆಚ್ಚಳವಾಗಿದೆ. ಮೆಣಸಿನಕಾಯಿ ಅಲ್ಪ ಇಳಿಕೆಯಾಗಿದೆ.

ಧನ್ಯ ಕೆ.ಜಿ ₹105–140, ಬ್ಯಾಡಗಿ ಮೆಣಸಿನಕಾಯಿ ಕೆ.ಜಿ ₹560–580, ಗೌರಿಬಿದನೂರು ಖಾರದ ಮೆಣಸಿನಕಾಯಿ ಕೆ.ಜಿ ₹250–260, ಹುಣಸೆಹಣ್ಣು ₹140–180, ಕಾಳುಮೆಣಸು ಕೆ.ಜಿ ₹700–720, ಜೀರಿಗೆ ಕೆ.ಜಿ ₹680–700, ಸಾಸಿವೆ ಕೆ.ಜಿ ₹85–90, ಮೆಂತ್ಯ ಕೆ.ಜಿ ₹95–100, ಚಕ್ಕೆ ಕೆ.ಜಿ ₹260–280, ಲವಂಗ ಕೆ.ಜಿ ₹1,050–1,100, ಗುಣಮಟ್ಟದ ಗಸಗಸೆ ಕೆ.ಜಿ ₹1,350–1,400, ಬಾದಾಮಿ ಕೆ.ಜಿ ₹650–680, ಗೋಡಂಬಿ ಕೆ.ಜಿ ₹600–650, ದ್ರಾಕ್ಷಿ ಕೆ.ಜಿ ₹200–220ಕ್ಕೆ ಮಂಡಿಪೇಟೆ ಮಾರುಕಟ್ಟೆಯಲ್ಲಿ ಮಾರಾಟವಾಗುತ್ತಿದೆ.

ಕೋಳಿ ಏರಿಕೆ: ಕೋಳಿ ಮಾಂಸದ ಬೆಲೆ ಅಲ್ಪ ಪ್ರಮಾಣದಲ್ಲಿ ಏರಿಕೆಯಾಗಿದ್ದು, ಬ್ರಾಯ್ಲರ್ ಕೋಳಿ ಕೆ.ಜಿ ₹140, ರೆಡಿ ಚಿಕನ್ ಕೆ.ಜಿ ₹240, ಸ್ಕಿನ್‌ಲೆಸ್ ಕೆ.ಜಿ ₹250, ಮೊಟ್ಟೆ ಕೋಳಿ (ಫಾರಂ) ಕೆ.ಜಿ ₹110ಕ್ಕೆ ತಲುಪಿದೆ.

ಮೀನು ಕಡಿಮೆ: ಮಾರುಕಟ್ಟೆಗೆ ಸಮುದ್ರ ಮೀನಿನ ಆವಕ ಕಡಿಮೆಯಾಗಿದ್ದು, ಬಂಗುಡೆ ಕೆ.ಜಿ ₹190, ಅಂಜಲ್ ಕೆ.ಜಿ ₹700, ಬಿಳಿ ಮಾಂಜಿ ಕೆ.ಜಿ ₹960, ಕಪ್ಪುಮಾಂಜಿ ಕೆ.ಜಿ ₹780, ಸೀಗಡಿ ಕೆ.ಜಿ ₹650ಕ್ಕೆ ನಗರದ ಮತ್ಸ್ಯದರ್ಶಿನಿಯಲ್ಲಿ ಮಾರಾಟವಾಗುತ್ತಿದೆ.

******

ದರ ಪಟ್ಟಿ.....

ಹಣ್ಣು (ಬೆಲೆ ಕೆ.ಜಿ ₹)

ಸೇಬು;100–180

ದಾಳಿಂಬೆ;200–250

ಮೂಸಂಬಿ;60-80

ಕಿತ್ತಳೆ;80

ಸಪೋಟ;100

ಏಲಕ್ಕಿ ಬಾಳೆ;130

ಪಚ್ಚಬಾಳೆ;50

ಸೀಬೆ;80–100

ಪೈನಾಪಲ್;80

ಪಪ್ಪಾಯ;40

ಕರಬೂಜ;40–60

ಕಲ್ಲಂಗಡಿ;40

ದ್ರಾಕ್ಷಿ;160–200

******

ಧಾನ್ಯ (ಬೆಲೆ ಕೆ.ಜಿ ₹) (ಮಂಡಿಪೇಟೆ)

ತೊಗರಿ ಬೇಳೆ;150–170

ಕಡಲೆ ಬೇಳೆ;80–85

ಉದ್ದಿನ ಬೇಳೆ;130–150

ಹೆಸರು ಬೇಳೆ;115–120

ಕಡಲೆಕಾಳು;75–80

ಹೆಸರು ಕಾಳು;120–130

ಅಲಸಂದೆ;100–110

ಅವರೆಕಾಳು;160–165

ಅವರೆಬೇಳೆ;195–200

ಹುರುಳಿಕಾಳು;100–105

ಹುರಿಗಡಲೆ;95–100

ಬಟಾಣಿ;95–100

ಕಡಲೆ ಬೀಜ;140–145

ಗೋಧಿ;36–42

ಸಕ್ಕರೆ;40–42

**

ತರಕಾರಿ (ಬೆಲೆ ಕೆ.ಜಿ ₹) (ಅಂತರಸನಹಳ್ಳಿ ಮಾರುಕಟ್ಟೆ)

ಬೀನ್ಸ್;40–50

ಕ್ಯಾರೇಟ್;30–40

ಬೀಟ್ರೂಟ್‌;25–30

ಈರುಳ್ಳಿ;25–30

ಟೊಮೆಟೊ;10–15

ಆಲೂಗಡ್ಡೆ;25–30

ಗೆಡ್ಡೆಕೋಸು;30–40

ಮೂಲಂಗಿ;25–30

ಬೆಂಡೆಕಾಯಿ;15–20

ಬದನೆಕಾಯಿ;15–20

ಎಲೆಕೋಸು;10–15

ಹೂಕೋಸು(1ಕ್ಕೆ);30

ತೊಂಡೆಕಾಯಿ;25–30

ಹಾಗಲಕಾಯಿ;25–30

ನುಗ್ಗೆಕಾಯಿ;20–25

ಮೆಣಸಿನಕಾಯಿ;40–50

ಕ್ಯಾಪ್ಸಿಕಂ;30–40

ಶುಂಠಿ;80–100

ಸೌತೆಕಾಯಿ 1ಕ್ಕೆ;4–5

ನಿಂಬೆಹಣ್ಣು 1ಕ್ಕೆ;2–3

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT