ಗೋರ್ ಸೀಕವಾಡಿ ಸಾಮಾಜಿಕ ಚಳವಳಿ ಜಿಲ್ಲಾ ಘಟಕದ ಸಂಯೋಜಕ ಚನ್ನಕೇಶವ ಪವಾರ್ ಪತ್ರಿಕಾ ಗೋಷ್ಠಿಯಲ್ಲಿ ಮಾತನಾಡಿ, ಪರಿಶಿಷ್ಟ ಜಾತಿಯಿಂದ ಬಂಜಾರ (ಲಂಬಾಣಿ), ಭೋವಿ, ಕೊರಮ, ಕೊರಚ ಜಾತಿಗಳನ್ನು ತೆಗೆಯಬೇಕೆಂದು ಕೆಲ ಕಿಡಿಗೇಡಿಗಳು ಒತ್ತಾಯಿಸುತ್ತಿದ್ದಾರೆ. ಈ ಜಾತಿಗಳ ಮೀಸಲಾತಿ ಭಿಕ್ಷೆಯಲ್ಲ. ಡಾ.ಬಾಬಾ ಸಾಹೇಬ್ ಅಂಬೇಡ್ಕರ್ ಅವರು ಸಮುದಾಯಗಳಿಗೆ ಮೂಲ ಸಂವಿಧಾನದಲ್ಲಿ ನೀಡಿರುವ ಸಂವಿಧಾನಬದ್ಧ ಹಕ್ಕು ಎಂದು ಮುಖ್ಯಮಂತ್ರಿಗೆ ಪತ್ರ ಚಳವಳಿ ನಡೆಸಲಾಗುವುದು ಎಂದರು.