ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪಾವಗಡ: ಕರಡಿ ದಾಳಿಗೆ ರೈತ ಸಾವು

Last Updated 22 ಮಾರ್ಚ್ 2019, 5:50 IST
ಅಕ್ಷರ ಗಾತ್ರ

ಪಾವಗಡ: ಜಮೀನಿಗೆ ಹೋಗುತ್ತಿದ್ದ ರೈತರ ಮೇಲೆ ತಾಲ್ಲೂಕಿನ ಸಾಸಲಕುಂಟೆ ಗುಡ್ಡದ ಬಳಿ ಶುಕ್ರವಾರ ಬೆಳಗ್ಗೆ ಕರಡಿ ದಾಳಿ ಮಾಡಿದ್ದು,ರೈತನೋರ್ವ ಸ್ಥಳದಲ್ಲೇಮೃತಪಟ್ಟಿದ್ದಾರೆ.

ಸಾಸಲಕುಂಟೆ ಗ್ರಾಮದ ವೀರಾಂಜನೇಯ(45) ಕರಡಿ ದಾಳಿಗೆ ಬಲಿಯಾದ ರೈತ. ಗ್ರಾಮದ ಬಳಿಯ ಜಮೀನಿಗೆ ಗುಡ್ಡದ ಬಳಿಯಿಂದ ಹೋಗುವಾಗ ಕರಡಿ ಏಕಾಏಕಿದಾಳಿ ಮಾಡಿದೆ.

ಇದೇ ಗ್ರಾಮದ ಶಿವಪ್ಪರೆಡ್ಡಿ, ಗೋಪಾಲರೆಡ್ಡಿ, ಮೋಹನ್, ನರಸಿಂಹರೆಡ್ಡಿ, ಎರ್ರಪ್ಪ, ಅಜ್ಜಪ್ಪ ಎಂಬುವರ ಕೈ, ಕಾಲಿಗೆ ಕಚ್ಚಿದೆ. ಗಾಯಾಳುಗಳನ್ನು ಪಟ್ಟಣದ ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಗಿದೆ.

ಮೃತರ ದೇಹ ಸ್ಥಳಾಂತರಿಸಲು ಬಿಡದ ಕರಡಿ: ಸುಮಾರು 3 ಗಂಟೆಕಳೆದರೂ ಕರಡಿ ಗುಡ್ಡದಲ್ಲಿಯೇ ಬೀಡು ಬಿಟ್ಟಿದೆ. ಮೃತರ ದೇಹ ಸ್ಥಳಾಂತರಿಸಲು ಗ್ರಾಮಸ್ಥರು ಹಾಗೂ ಅರಣ್ಯ ಇಲಾಖೆ ಸಿಬ್ಬಂದಿಗೆ ಅವಕಾಶ ಕೊಡುತ್ತಿಲ್ಲ. ನೂರಾರು ಮಂದಿ ಸಾರ್ವಜನಿಕರು ಸ್ಥಳದಲ್ಲಿ ನೆರೆದಿದ್ದಾರೆ. ಮೃತರ ಬಳಿ ಹೋದರೆ ಕರಡಿ ಗುಡ್ಡದಿಂದ ಶವದತ್ತ ಓಡಿ ಬರುತ್ತಿದೆ.

ಕರಡಿ ದಾಳಿಯಲ್ಲಿ ಮೃತಪಟ್ಟ ರೈತ ವೀರಾಂಜನೇಯ ದೇಹ
ಕರಡಿ ದಾಳಿಯಲ್ಲಿ ಮೃತಪಟ್ಟ ರೈತ ವೀರಾಂಜನೇಯ ದೇಹ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT