ವಕೀಲ ಜೆ.ರಾಮಯ್ಯ ಮಾತನಾಡಿ, ‘ಪರಿಶಿಷ್ಟ ಜಾತಿ ಮತ್ತು ಪಂಗಡದ ಅಭಿವೃದ್ಧಿಗೆ ಮೀಸಲಾಗಿದ್ದ ₹ 1 ಸಾವಿರ ಕೋಟಿ ಅನುದಾನ ಬಳಕೆಯಲ್ಲಿ ಸಚಿವ ಎಚ್.ಆಂಜನೇಯ ವಿಫಲವಾಗಿದ್ದಾರೆ. ಅನುದಾನವನ್ನು ರೈತರ ಸಾಲಮನ್ನಾ ಮಾಡಲು ಬಳಸಿರುವ ಕ್ರಮ ಖಂಡಿಸಿ ಮಾರ್ಚ್ 12ರಂದು ಮುಖ್ಯಮಂತ್ರಿ ಹಾಗೂ ಸಚಿವ ಎಚ್.ಆಂಜನೇಯ ಅವರಿಗೆ ಕಪ್ಪುಬಾವುಟ ಪ್ರದರ್ಶನ ಹಾಗೂ ಘೇರಾವ್ ಹಾಕುತ್ತೇವೆ’ ಎಂದರು. ಶ್ರೀಕಂಠ, ಪ್ರವೀಣ್, ವೆಂಕಟೇಶ್ ಇದ್ದರು.