ಮಧುಗಿರಿ: ಮಿಡಿಗೇಶಿ ಹೋಬಳಿಯ ಜಿ.ಡಿ.ಪಾಳ್ಯ ಗ್ರಾಮದಲ್ಲಿ ರೈತ ಕರಿಯಣ್ಣ (50) ಮೇಲೆ ಕರಡಿ ಮಂಗಳವಾರ ರಾತ್ರಿ ದಾಳಿ ಮಾಡಿ ಗಂಭೀರವಾಗಿ ಗಾಯಗೊಳಿಸಿದೆ.
ಜಮೀನಿನ ಕೆಲಸ ಮುಗಿಸಿಕೊಂಡು ಮನೆಗೆ ಬರುವಾಗ ಪೊದೆಯಲ್ಲಿದ್ದ ಕರಡಿ ಏಕಾಏಕಿಯಾಗಿ ಕರಿಯಣ್ಣರ ಮೇಲೆ ದಾಳಿ ಮಾಡಿದೆ. ತಲೆ ಮತ್ತು ಕಾಲಿನ ಭಾಗಗಳಲ್ಲಿ ಗಾಯಗಳಾಗಿವೆ. ಅವರ ಚೀರಾಟದಿಂದ ಅಕ್ಕ–ಪಕ್ಕದ ಜಮೀನುಗಳಲ್ಲಿ ಇದ್ದ ರೈತರು ಸ್ಥಳಕ್ಕೆ ಬಂದು ಕರಡಿಯನ್ನು ಓಡಿಸಿದ್ದಾರೆ.
ಕರಿಯಣ್ಣಗೆ ಮಧುಗಿರಿ ಆಸ್ಪತ್ರೆಯಲ್ಲಿ ಪ್ರಥಮ ಚಿಕಿತ್ಸೆ ಕೊಡಿಸಲಾಯಿತು.