ತಾಲ್ಲೂಕಿನ 41 ಕೆರೆಗಳಿಗೆ ಭದ್ರಾ ನೀರು ಹರಿಯುವುದರಿಂದ ತಾಲ್ಲೂಕಿನ ಚಿತ್ರಣ ಸಂಪೂರ್ಣವಾಗಿ ಬದಲಾಗುವುದು. ಈಗಾಗಲೇ ಹೇಮಾವತಿ ನೀರು ತಾಲ್ಲೂಕಿಗೆ ಬರುತ್ತಿದೆ. ಇದರ ಜೊತೆಗೆ ಭದ್ರಾ ಹಾಗೂ ಎತ್ತಿನ ಹೊಳೆ ಯೋಜನೆಗಳಲ್ಲಿ ನೀರು ಹರಿಸಿ ತಾಲ್ಲೂಕನ್ನು ತ್ರಿವೇಣಿ ಸಂಗಮ ಮಾಡಲಾಗುವುದು. ತಾಲ್ಲೂಕು ಒಟ್ಟು 14,558 ಹೆಕ್ಟೇರ್ ನೀರಾವರಿ ಪ್ರದೇಶವಾಗಲಿದೆ. ಇದರಿಂದಾಗಿ ರೈತರ ಸ್ಥಿತಿ ಉತ್ತಮವಾಗುವುದು ಎಂದರು.