<p><strong>ತುಮಕೂರು:</strong> ತಾಲ್ಲೂಕಿನ ವಿವಿಧೆಡೆ ಎಚ್5ಎನ್1 (ಹಕ್ಕಿಜ್ವರ) ವೈರಾಣು ಸೋಂಕಿನಿಂದ ನವಿಲುಗಳು ಮೃತಪಟ್ಟಿರುವುದು ಪ್ರಯೋಗಾಲಯದ ವರದಿಯಿಂದ ದೃಢಪಟ್ಟಿದೆ.</p>.<p>ಏಪ್ರಿಲ್ 16ರಿಂದ 21ರವರೆಗೆ ತಾಲ್ಲೂಕಿನ ಊರ್ಡಿಗೆರೆ ಹೋಬಳಿ ಬೊಮ್ಮನಹಳ್ಳಿ, ಕೋಳಿಹಳ್ಳಿ ಹಾಗೂ ಗೂಳೂರು ಹೋಬಳಿ ಬೈರಸಂದ್ರ, ಹುಲ್ಲೇನಹಳ್ಳಿ ಗ್ರಾಮದ ಸುತ್ತಮುತ್ತ 44 ನವಿಲುಗಳು ಮೃತಪಟ್ಟಿದ್ದವು.</p>.<p>ನವಿಲುಗಳ ಮೃತ ದೇಹದ ಮಾದರಿಯನ್ನು ಪರೀಕ್ಷೆಗಾಗಿ ಮಧ್ಯಪ್ರದೇಶದ ಭೋಪಾಲ್ನಲ್ಲಿರುವ ಪ್ರಯೋಗಾಲಯಕ್ಕೆ ಕಳುಹಿಸಲಾಗಿತ್ತು. ಈಗ ಪ್ರಯೋಗಾಲಯದ ವರದಿ ಬಂದಿದ್ದು, ಹಕ್ಕಿಜ್ವರ ಸೋಂಕಿನಿಂದ ನವಿಲುಗಳು ಮೃತಪಟ್ಟಿರುವುದು ಖಚಿತವಾಗಿದೆ.</p>.<p>ಎರಡು ಹೋಬಳಿ ವ್ಯಾಪ್ತಿಯಲ್ಲಿ 31 ಕೋಳಿ ಅಂಗಡಿ, 10 ಕೋಳಿ ಫಾರಂಗಳಿವೆ. ನವಿಲುಗಳು ಮೃತಪಟ್ಟ ಪ್ರದೇಶದಿಂದ 10 ಕಿ.ಮೀ ವ್ಯಾಪ್ತಿಯಲ್ಲಿ ತೀವ್ರ ನಿಗಾ ವಹಿಸಲಾಗಿದೆ. ಈ ಭಾಗದ ಮಾಂಸ ಮಾರಾಟದ ಅಂಗಡಿಗಳನ್ನು ಮುಚ್ಚಿ, ಅಗತ್ಯ ಮುಂಜಾಗ್ರತಾ ಕ್ರಮ ಕೈಗೊಳ್ಳುವಂತೆ ಕೋಳಿ ಸಾಕಾಣಿಕೆದಾರರಿಗೆ ಜಿಲ್ಲಾ ಆಡಳಿತ ನಿರ್ದೇಶಿಸಿದೆ.</p>.<p>10 ದಿನಗಳಿಂದ ನವಿಲು ಸಾವು ಸಂಭವಿಸಿಲ್ಲ. ತಜ್ಞ ವೈದ್ಯರು ಜಿಲ್ಲಾ ಆಡಳಿತದ ಜತೆಗೆ ಚರ್ಚಿಸಿ, ಮುನ್ನೆಚ್ಚರಿಕೆ ವಹಿಸುವಂತೆ ಅಧಿಕಾರಿಗಳಿಗೆ ಸೂಚಿಸಿದ್ದಾರೆ.</p>.<h2>30 ಕೋಳಿ ಸಾವು </h2><p>ನವಿಲುಗಳು ಮೃತಪಟ್ಟಿದ್ದ ಬೊಮ್ಮನಹಳ್ಳಿ ಬಳಿ ಕೋಳಿ ಫಾರಂನಲ್ಲಿ ಶುಕ್ರವಾರ 30 ಕೋಳಿಗಳು ಮೃತಪಟ್ಟಿವೆ. ಇದು ಈ ಭಾಗದ ಜನರಲ್ಲಿ ಆತಂಕ ಸೃಷ್ಟಿಸಿದೆ. ಕೋಳಿ ಮಾದರಿಯನ್ನು ಪ್ರಯೋಗಾಲಯಕ್ಕೆ ಕಳುಹಿಸಲಾಗಿದೆ. ರೋಗ ಹರಡುವಿಕೆ ತಡೆಯುವ ಉದ್ದೇಶದಿಂದ ಜಿಲ್ಲಾ ಆಡಳಿತ ತ್ವರಿತ ಸ್ಪಂದನಾ ತಂಡ (ಆರ್ಟಿಆರ್) ರಚಿಸಿದೆ. ಕೋಳಿ ಫಾರಂಗಳಿಗೆ ಸೋಡಿಯಂ ಕ್ಲೋರೈಡ್ ಸಿಂಪಡಣೆ ಮಾಡಲಾಗಿದೆ.</p><p> ‘ಪ್ರಯೋಗಾಲಯದ ವರದಿ ಬಂದ ನಂತರ ಕೋಳಿ ಸಾವಿಗೆ ನಿಖರ ಕಾರಣ ತಿಳಿಯಲಿದೆ. ಫಾರಂ ಮಾಲೀಕರು ನೆರೆಹೊರೆಯವರೂ ಎಲ್ಲಿಗೂ ಹೋಗದಂತೆ ಸೂಚಿಸಲಾಗಿದೆ’ ಎಂದು ಜಿಲ್ಲಾಧಿಕಾರಿ ಶುಭ ಕಲ್ಯಾಣ್ ತಿಳಿಸಿದ್ದಾರೆ. </p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ತುಮಕೂರು:</strong> ತಾಲ್ಲೂಕಿನ ವಿವಿಧೆಡೆ ಎಚ್5ಎನ್1 (ಹಕ್ಕಿಜ್ವರ) ವೈರಾಣು ಸೋಂಕಿನಿಂದ ನವಿಲುಗಳು ಮೃತಪಟ್ಟಿರುವುದು ಪ್ರಯೋಗಾಲಯದ ವರದಿಯಿಂದ ದೃಢಪಟ್ಟಿದೆ.</p>.<p>ಏಪ್ರಿಲ್ 16ರಿಂದ 21ರವರೆಗೆ ತಾಲ್ಲೂಕಿನ ಊರ್ಡಿಗೆರೆ ಹೋಬಳಿ ಬೊಮ್ಮನಹಳ್ಳಿ, ಕೋಳಿಹಳ್ಳಿ ಹಾಗೂ ಗೂಳೂರು ಹೋಬಳಿ ಬೈರಸಂದ್ರ, ಹುಲ್ಲೇನಹಳ್ಳಿ ಗ್ರಾಮದ ಸುತ್ತಮುತ್ತ 44 ನವಿಲುಗಳು ಮೃತಪಟ್ಟಿದ್ದವು.</p>.<p>ನವಿಲುಗಳ ಮೃತ ದೇಹದ ಮಾದರಿಯನ್ನು ಪರೀಕ್ಷೆಗಾಗಿ ಮಧ್ಯಪ್ರದೇಶದ ಭೋಪಾಲ್ನಲ್ಲಿರುವ ಪ್ರಯೋಗಾಲಯಕ್ಕೆ ಕಳುಹಿಸಲಾಗಿತ್ತು. ಈಗ ಪ್ರಯೋಗಾಲಯದ ವರದಿ ಬಂದಿದ್ದು, ಹಕ್ಕಿಜ್ವರ ಸೋಂಕಿನಿಂದ ನವಿಲುಗಳು ಮೃತಪಟ್ಟಿರುವುದು ಖಚಿತವಾಗಿದೆ.</p>.<p>ಎರಡು ಹೋಬಳಿ ವ್ಯಾಪ್ತಿಯಲ್ಲಿ 31 ಕೋಳಿ ಅಂಗಡಿ, 10 ಕೋಳಿ ಫಾರಂಗಳಿವೆ. ನವಿಲುಗಳು ಮೃತಪಟ್ಟ ಪ್ರದೇಶದಿಂದ 10 ಕಿ.ಮೀ ವ್ಯಾಪ್ತಿಯಲ್ಲಿ ತೀವ್ರ ನಿಗಾ ವಹಿಸಲಾಗಿದೆ. ಈ ಭಾಗದ ಮಾಂಸ ಮಾರಾಟದ ಅಂಗಡಿಗಳನ್ನು ಮುಚ್ಚಿ, ಅಗತ್ಯ ಮುಂಜಾಗ್ರತಾ ಕ್ರಮ ಕೈಗೊಳ್ಳುವಂತೆ ಕೋಳಿ ಸಾಕಾಣಿಕೆದಾರರಿಗೆ ಜಿಲ್ಲಾ ಆಡಳಿತ ನಿರ್ದೇಶಿಸಿದೆ.</p>.<p>10 ದಿನಗಳಿಂದ ನವಿಲು ಸಾವು ಸಂಭವಿಸಿಲ್ಲ. ತಜ್ಞ ವೈದ್ಯರು ಜಿಲ್ಲಾ ಆಡಳಿತದ ಜತೆಗೆ ಚರ್ಚಿಸಿ, ಮುನ್ನೆಚ್ಚರಿಕೆ ವಹಿಸುವಂತೆ ಅಧಿಕಾರಿಗಳಿಗೆ ಸೂಚಿಸಿದ್ದಾರೆ.</p>.<h2>30 ಕೋಳಿ ಸಾವು </h2><p>ನವಿಲುಗಳು ಮೃತಪಟ್ಟಿದ್ದ ಬೊಮ್ಮನಹಳ್ಳಿ ಬಳಿ ಕೋಳಿ ಫಾರಂನಲ್ಲಿ ಶುಕ್ರವಾರ 30 ಕೋಳಿಗಳು ಮೃತಪಟ್ಟಿವೆ. ಇದು ಈ ಭಾಗದ ಜನರಲ್ಲಿ ಆತಂಕ ಸೃಷ್ಟಿಸಿದೆ. ಕೋಳಿ ಮಾದರಿಯನ್ನು ಪ್ರಯೋಗಾಲಯಕ್ಕೆ ಕಳುಹಿಸಲಾಗಿದೆ. ರೋಗ ಹರಡುವಿಕೆ ತಡೆಯುವ ಉದ್ದೇಶದಿಂದ ಜಿಲ್ಲಾ ಆಡಳಿತ ತ್ವರಿತ ಸ್ಪಂದನಾ ತಂಡ (ಆರ್ಟಿಆರ್) ರಚಿಸಿದೆ. ಕೋಳಿ ಫಾರಂಗಳಿಗೆ ಸೋಡಿಯಂ ಕ್ಲೋರೈಡ್ ಸಿಂಪಡಣೆ ಮಾಡಲಾಗಿದೆ.</p><p> ‘ಪ್ರಯೋಗಾಲಯದ ವರದಿ ಬಂದ ನಂತರ ಕೋಳಿ ಸಾವಿಗೆ ನಿಖರ ಕಾರಣ ತಿಳಿಯಲಿದೆ. ಫಾರಂ ಮಾಲೀಕರು ನೆರೆಹೊರೆಯವರೂ ಎಲ್ಲಿಗೂ ಹೋಗದಂತೆ ಸೂಚಿಸಲಾಗಿದೆ’ ಎಂದು ಜಿಲ್ಲಾಧಿಕಾರಿ ಶುಭ ಕಲ್ಯಾಣ್ ತಿಳಿಸಿದ್ದಾರೆ. </p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>