ತುಮಕೂರು: ಹನುಮಂತಪುರದ ಬಯಲಾಂಜನೇಯಸ್ವಾಮಿ ದೇವಸ್ಥಾನದಲ್ಲಿ ರಾಮನವಮಿಯ ಪ್ರಯುಕ್ತ ಯಕ್ಷದೀವಿಗೆ ತಂಡದ ಕಲಾವಿದರು ‘ವಾಲಿಮೋಕ್ಷ’ ಯಕ್ಷಗಾನ ಪ್ರಸಂಗ ಪ್ರದರ್ಶಿಸಿದರು.
ರಾಮಲಕ್ಷ್ಮಣರೊಂದಿಗೆ ಆಂಜನೇಯನ ಮೊದಲ ಭೇಟಿ, ಸುಗ್ರೀವ ಸಖ್ಯ, ವಾಲಿ-ಸುಗ್ರೀವರ ಕಾಳಗ, ವಾಲಿಯ ಸಂಹಾರ ಸನ್ನಿವೇಶಗಳನ್ನು ಒಳಗೊಂಡ ರಾಮಾಯಣದ ಪ್ರಸಂಗವು ಅಪಾರ ಸಂಖ್ಯೆಯಲ್ಲಿ ಸೇರಿದ್ದ ಕಲಾಭಿಮಾನಿಗಳ ಮೆಚ್ಚುಗೆಗೆ ಪಾತ್ರವಾಯಿತು.
ಹಿಮ್ಮೇಳದಲ್ಲಿ ಭಾಗವತರಾಗಿ ಅರ್ಜುನ್ ರಾವ್ ಕೋರ್ಡೇಲು, ಚೆಂಡೆವಾದಕರಾಗಿ ವೇಣು ಪಡ್ರೆ, ಮದ್ದಳೆವಾದಕರಾಗಿ ಶ್ರೀಶ ರಾವ್ ನಿಡ್ಲೆ, ಚಕ್ರತಾಳವಾದಕರಾಗಿ ಅಭಿಲಾಷ್ ಉಡುಪ ಸಹಕರಿಸಿದರು.