ತೆರವಿಗೆ ಪೊಲೀಸ್ ಪ್ರಸ್ತಾವನೆ: ಹಬ್ಬ–ಹರಿದಿನ, ರಾಜಕಾರಣಿಗಳ ಜನ್ಮದಿನದಂದು ನಗರದಲ್ಲಿ ಶುಭಕೋರುವ ಬ್ಯಾನರ್ಗಳ ಹಾವಳಿ ಹೆಚ್ಚುತ್ತದೆ. ಒಂದು ಪಕ್ಷ, ಧರ್ಮ, ಸಮುದಾಯದವರಿಗೆ ಪ್ರತಿಸ್ಪರ್ಧಿಯಂತೆ ಬೇರೆಯವರು ಸಹ ಬ್ಯಾನರ್ಗಳನ್ನು ಕಟ್ಟುತ್ತಾರೆ. ಈ ರೀತಿಯ ಅನಾರೋಗ್ಯಕರ ಸ್ಪರ್ಧೆಯಿಂದ ಗಲಾಟೆಗಳು ಆಗಲುಬಹುದು. ಹಾಗಾಗಿ ಬ್ಯಾನರ್ಗಳನ್ನು ಆಗಾಗ್ಗೆ ತೆರವು ಮಾಡುವಂತೆ ಮಹಾನಗರ ಪಾಲಿಕೆಗೆ ನಾವು ಪತ್ರ ಬರೆದಿದ್ದೇವೆ ಎಂದು ತಿಲಕ್ ಪಾರ್ಕ್ ಠಾಣೆಯ ಇನ್ಸ್ಪೆಕ್ಟರ್ ಎಸ್.ಪಾರ್ವತಮ್ಮ ಅವರು ‘ಪ್ರಜಾವಾಣಿ’ಗೆ ತಿಳಿಸಿದರು.