ಇಲ್ಲಿ ನಡೆದ ಚುನಾವಣಾ ಪ್ರಚಾರದ ಸಮಾವೇಶದಲ್ಲಿ ಮಾತನಾಡಿದ ಅವರು, ‘ದಲಿತರ ಕಲ್ಯಾಣ ಮಾಡುವುದಾಗಿ ಹೇಳಿ, ಜಿಲ್ಲೆಯಿಂದ ಆರಿಸಿಬಂದ ಮಂತ್ರಿಯೊಬ್ಬರು ಕೊಳವೆಬಾವಿ ಕೊರೆಸುವ, ಹಾಸ್ಟೆಲ್ಗಳಿಗೆ ಹಾಸಿಗೆ ಒದಗಿಸುವ ಯೋಜನೆಗಳಲ್ಲಿ ದುಡ್ಡು ಹೊಡೆದರು’ ಎಂದು ಮೋದಿ ಅವರು ಸಚಿವ ಎಚ್.ಆಂಜನೇಯ ಹೆಸರು ಪ್ರಸ್ತಾಪಿಸದೆ ಚೇಡಿಸಿದರು.