ಪಾವಗಡ: ಬಿಎಸ್ಎನ್ಎಲ್ ಕೇಬಲ್ ಕಳವು ಮಾಡಿದ್ದ ಆರೋಪಿಗೆ ಇಲ್ಲಿನ ಜೆಎಂಎಫ್ ಹಾಗೂ ಪ್ರಧಾನ ಸಿವಿಲ್ ನ್ಯಾಯಾಲಯ ಒಂದು ವರ್ಷ ಜೈಲು ಶಿಕ್ಷೆ ವಿಧಿಸಿ ತೀರ್ಪು ನೀಡಿದೆ.
ಬಾಗೇಪಲ್ಲಿ ತಾಲ್ಲೂಕು ಸೀಗಲಪಲ್ಲಿ ಗ್ರಾಮದ ಮುನೀಂದ್ರ(38) ಶಿಕ್ಷೆಗೆ ಒಳಗಾದವರು.
2022ರ ಮಾರ್ಚ್ 25ರಂದು ತಾಲ್ಲೂಕಿನ ಕಣಿವೇನಹಳ್ಳಿ ಬಳಿಯ ಬಿಎಸ್ಎನ್ಎಲ್ ಟವರ್ನ ಸುಮಾರು 126 ಮೀಟರ್ ಉದ್ದದ ಕೇಬಲ್ ಕಳುವಾಗಿತ್ತು. ಆರೋಪಿಯನ್ನು ಸಹಾಯಕ ಸಬ್ ಇನ್ಸ್ಪೆಕ್ಟರ್ ರಾಮಚಂದ್ರ ಬಂಧಿಸಿದ್ದರು.
ಪ್ರಕರಣದ ವಿಚಾರಣೆ ನಡೆಸಿದ ಪ್ರಧಾನ ಸಿವಿಲ್ ನ್ಯಾಯಾಧೀಶ ಶ್ರೀಕಾಂತ್ ರವೀಂದ್ರ ಆರೋಪಿಗೆ ಜೈಲು ಶಿಕ್ಷೆ ವಿಧಿಸಿ ತೀರ್ಪು ನೀಡಿದ್ದಾರೆ.
ಸರ್ಕಾರದ ಪರವಾಗಿ ಸಹಾಯಕ ಸರ್ಕಾರಿ ಅಭಿಯೋಜಕ ವಿ. ಮಂಜುನಾಥ್ ವಾದಿಸಿದ್ದರು.