ತುಮಕೂರು: ಎಸ್ಸೆಸ್ಸೆಲ್ಸಿ ಪರೀಕ್ಷೆಗೆ ನೋಂದಾಯಿಸಿಕೊಂಡಿದ್ದ ಅಭ್ಯರ್ಥಿಯ ಬದಲಾಗಿ ಬೇರೊಬ್ಬರು ಪರೀಕ್ಷೆಗೆ ಹಾಜರಾದ ಘಟನೆ ತಿಪಟೂರು ನಗರದಲ್ಲಿ ಸೋಮವಾರ ನಡೆದಿದೆ.
ವಿಜ್ಞಾನವಿಷಯದ ಪರೀಕ್ಷೆಗೆ ಮಂಜುನಾಥ ನೋಂದಣಿ ಮಾಡಿಕೊಂಡಿದ್ದರು. ಇವರ ಬದಲಾಗಿ ಮುರಳೀಧರ ಎಂಬುವವರು ಪರೀಕ್ಷೆ ಬರೆಯುತ್ತಿದ್ದರು. ವಿಷಯ ಗಮನಕ್ಕೆ ಬಂದ ಕೂಡಲೇ ಅವರನ್ನು ಪರೀಕ್ಷಾ ಕೆಂದ್ರದಿಂದ ಹೊರಗೆ ಕಳುಹಿಸಿದ್ದಾರೆ.
ಮಂಜುನಾಥ ತಿಪಟೂರು ನಗರಸಭೆ ಕಚೇರಿಯಲ್ಲಿ ಪೌರ ಕಾರ್ಮಿಕರಾಗಿ ಕೆಲಸ ಮಾಡುತ್ತಿದ್ದರು ಎಂದು ತಿಳಿದು ಬಂದಿದೆ.