ತುಮಕೂರು: ಕುಣಿಗಲ್ ತಾಲ್ಲೂಕಿನ ಹುಲಿಯೂರುದುರ್ಗ ಸಮೀಪದ ಅರಮನೆಹೊನ್ನಮಾಚನಹಳ್ಳಿ ಬಸವಣ್ಣ ದೇವಾಲಯದ ಬಳಿ ಮಂಗಳವಾರ ಕಾರಿಗೆ ಟಿಪ್ಪರ್ ಡಿಕ್ಕಿ ಹೊಡೆದು ಒಂದೇ ಕುಟುಂಬದ ಮೂವರು ಮೃತಪಟ್ಟಿದ್ದಾರೆ.
ಚನ್ನಪಟ್ಟಣದ ಶಾಮಿಯ ಮೊಹಲ್ಲಾದ ಸೈಯದ್ ಮಹಮ್ಮದ್ ನಜ್ಮಿ (42), ಅವರ ಪತ್ನಿ ನಾಜಿಯಾ (35), ಪುತ್ರ ಒಂದು ವರ್ಷದ ಸೈಯದ್ ಕುಂದನ್ ಅಸೀ ಮೃತಪಟ್ಟವರು.
ಮೂರು ವರ್ಷದ ಸೈಯದ್ ಕುಂದನ್ ನಬೀ ತೀವ್ರವಾಗಿ ಗಾಯಗೊಂಡಿದ್ದು, ಆದಿಚುಂಚನಗಿರಿ ಆಸ್ಪತ್ರೆಗೆ ದಾಖಲಿಸಲಾಗಿದೆ.