ರಾಘವೇಂದ್ರ ಅವರು ಮೂತಃ ಶೆಟ್ಟಿ ಬಣಜಿಗ ಜಾತಿಗೆ ಸೇರಿದ್ದಾರೆ. ಅವರ ಮೂಲ ದಾಖಲಾತಿಗಳನ್ನು ಮರೆಮಾಚಿ ತುಮಕೂರು ತಾಲ್ಲೂಕು ಕಚೇರಿಗೆ ಸುಳ್ಳು ದಾಖಲೆ ನೀಡಿ 2007ರ ಸೆಪ್ಟೆಂಬರ್ 24ರಂದು ಮತ್ತು 2015ರ ಡಿಸೆಂಬರ್ 31ರಂದು ಪರಿಶಿಷ್ಟ ಜಾತಿಯ ಆದಿ ಕರ್ನಾಟಕ ಪ್ರಮಾಣ ಪತ್ರ ಪಡೆದಿದ್ದು ಜಿಲ್ಲಾ ಜಾತಿ ಪರಿಶೀಲನಾ ಸಮಿತಿ ವಿಚಾರಣೆ ವೇಳೆ ದೃಢಪಟ್ಟಿದೆ ಎಂದು ದೂರಿನಲ್ಲಿ ವೆಂಕಟರಮಣಯ್ಯ ತಿಳಿಸಿದ್ದಾರೆ.