<p><strong>ಚಿಕ್ಕನಾಯಕನಹಳ್ಳಿ:</strong> ಸುಡುವ ಬಿಸಿಲಿನಿಂದ ಕಂಗೆಟ್ಟಿದ್ದ ಪಟ್ಟಣ ಹಾಗೂ ಸುತ್ತಮುತ್ತಲ ಗ್ರಾಮಾಂತರ ಪ್ರದೇಶಗಳಿಗೆ ಮಳೆ ಕೊನೆಗೂ ತಂಪೆರೆದಿದೆ.</p>.<p>ಎರಡು ದಿನಗಳಿಂದ ತಾಲ್ಲೂಕಿನಾದ್ಯಂತ ಸುರಿದ ಮಳೆ ಒಣಗಿದ್ದ ಭೂಮಿಗೆ ಜೀವಕಳೆ ನೀಡಿದೆ.</p>.<p>ತಾಲ್ಲೂಕಿನ ಶೆಟ್ಟೀಕೆರೆ, ಕುಪ್ಪೂರು, ಸಾಸಲು, ಹುಳಿಯಾರು ಮತ್ತು ಸಿಂಗದಹಳ್ಳಿ ಪ್ರದೇಶಗಳಲ್ಲಿ ಉತ್ತಮ ಮಳೆಯಾಗಿದೆ. </p>.<p>ಅಕಾಲಿಕ ಮಳೆಯು ತಾಲ್ಲೂಕಿನ ಪ್ರಮುಖ ಬೆಳೆಗಳಾದ ತೆಂಗು ಮತ್ತು ಅಡಿಕೆ ತೋಟಗಳಿಗೆ ಸಂಜೀವಿನಿಯಂತೆ ಒದಗಿಬಂದಿದೆ. ಕೆಲವು ವಾರಗಳಿಂದ ಅಂತರ್ಜಲ ಕುಸಿದು ತೋಟಗಳು ಒಣಗುವ ಭೀತಿಯಲ್ಲಿದ್ದ ರೈತರಿಗೆ ಮಳೆ ಹೊಸ ಭರವಸೆ ನೀಡಿದೆ. </p>.<p>ಪಟ್ಟಣ ಪ್ರದೇಶದಲ್ಲಿ ದೂಳು ಮತ್ತು ಮಿತಿಮೀರಿದ ಉಷ್ಣಾಂಶದಿಂದ ಜನರು ಪರದಾಡುತ್ತಿದ್ದರು. ಈ ಮಳೆಯಿಂದಾಗಿ ವಾತಾವರಣದಲ್ಲಿನ ಶಾಖ ಕಡಿಮೆಯಾಗಿದ್ದು, ಹವಾಮಾನ ಆಹ್ಲಾದಕರವಾಗಿದೆ. ರಸ್ತೆ ಬದಿಯ ಗಿಡಮರಗಳು ಹಸಿರಿನಿಂದ ಕಂಗೊಳಿಸುತ್ತಿದ್ದು, ಪ್ರಾಣಿ-ಪಕ್ಷಿಗಳಿಗೂ ಕುಡಿಯುವ ನೀರಿನ ಆಸರೆ ದೊರೆತಂತಾಗಿದೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಚಿಕ್ಕನಾಯಕನಹಳ್ಳಿ:</strong> ಸುಡುವ ಬಿಸಿಲಿನಿಂದ ಕಂಗೆಟ್ಟಿದ್ದ ಪಟ್ಟಣ ಹಾಗೂ ಸುತ್ತಮುತ್ತಲ ಗ್ರಾಮಾಂತರ ಪ್ರದೇಶಗಳಿಗೆ ಮಳೆ ಕೊನೆಗೂ ತಂಪೆರೆದಿದೆ.</p>.<p>ಎರಡು ದಿನಗಳಿಂದ ತಾಲ್ಲೂಕಿನಾದ್ಯಂತ ಸುರಿದ ಮಳೆ ಒಣಗಿದ್ದ ಭೂಮಿಗೆ ಜೀವಕಳೆ ನೀಡಿದೆ.</p>.<p>ತಾಲ್ಲೂಕಿನ ಶೆಟ್ಟೀಕೆರೆ, ಕುಪ್ಪೂರು, ಸಾಸಲು, ಹುಳಿಯಾರು ಮತ್ತು ಸಿಂಗದಹಳ್ಳಿ ಪ್ರದೇಶಗಳಲ್ಲಿ ಉತ್ತಮ ಮಳೆಯಾಗಿದೆ. </p>.<p>ಅಕಾಲಿಕ ಮಳೆಯು ತಾಲ್ಲೂಕಿನ ಪ್ರಮುಖ ಬೆಳೆಗಳಾದ ತೆಂಗು ಮತ್ತು ಅಡಿಕೆ ತೋಟಗಳಿಗೆ ಸಂಜೀವಿನಿಯಂತೆ ಒದಗಿಬಂದಿದೆ. ಕೆಲವು ವಾರಗಳಿಂದ ಅಂತರ್ಜಲ ಕುಸಿದು ತೋಟಗಳು ಒಣಗುವ ಭೀತಿಯಲ್ಲಿದ್ದ ರೈತರಿಗೆ ಮಳೆ ಹೊಸ ಭರವಸೆ ನೀಡಿದೆ. </p>.<p>ಪಟ್ಟಣ ಪ್ರದೇಶದಲ್ಲಿ ದೂಳು ಮತ್ತು ಮಿತಿಮೀರಿದ ಉಷ್ಣಾಂಶದಿಂದ ಜನರು ಪರದಾಡುತ್ತಿದ್ದರು. ಈ ಮಳೆಯಿಂದಾಗಿ ವಾತಾವರಣದಲ್ಲಿನ ಶಾಖ ಕಡಿಮೆಯಾಗಿದ್ದು, ಹವಾಮಾನ ಆಹ್ಲಾದಕರವಾಗಿದೆ. ರಸ್ತೆ ಬದಿಯ ಗಿಡಮರಗಳು ಹಸಿರಿನಿಂದ ಕಂಗೊಳಿಸುತ್ತಿದ್ದು, ಪ್ರಾಣಿ-ಪಕ್ಷಿಗಳಿಗೂ ಕುಡಿಯುವ ನೀರಿನ ಆಸರೆ ದೊರೆತಂತಾಗಿದೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>