ತಿಪಟೂರು:‘ಬಡವ ರಾಸ್ಕಲ್’ ಪ್ರಚಾರಕ್ಕಾಗಿ ನಟ ಡಾಲಿ ಧನಂಜಯ ತಾಲ್ಲೂಕಿನ ತಿಪಟೂರಿನ ತ್ರಿಮೂರ್ತಿ ಚಿತ್ರ ಮಂದಿರಕ್ಕೆ ಭೇಟಿ ನೀಡಿದರು. ಅಭಿಮಾನಿಗಳು ಧನಂಜಯಗೆ ಕೊಬ್ಬರಿ ಹಾರ ಹಾಕಿ ಸ್ವಾಗತಿಸಿದರು.
‘ಚಿತ್ರ ಉತ್ತಮವಾಗಿ ಮೂಡಿ ಬಂದಿರುವುದಕ್ಕೆ ಅಭಿಮಾನಿಗಳಿಂದ ಉತ್ತಮ ಪ್ರತಿಕ್ರಿಯೆ ದೊರೆತಿರುವುದು ಸಂತಸ ತಂದಿದೆ’ ಎಂದು ಧನಂಜಯ ಹೇಳಿದರು.
ಈ ಸಂದರ್ಭದಲ್ಲಿ ಕಿರುತೆರೆ ನಟ ದಯಾನಂದ ಸಾಗರ್, ಅಭಿಮಾನಿಗಳಾದ ಬೆಳಗರಹಳ್ಳಿ ರಾಜು, ಸುನೀಲ್, ನವೀನ್, ಜೈ ಶಿವು, ಭರತ್, ದಯಾನಂದ್ ಇದ್ದರು.