‘ಹಣ ದುರುಪಯೋಗದ ಬಗ್ಗೆ ಪಿಡಿಓ, ತಾಂತ್ರಿಕ ಅಧಿಕಾರಿ, ತಾಲ್ಲೂಕು ಪಂಚಾಯಿತಿ ಕಾರ್ಯನಿರ್ವಾಹಕ ಅಧಿಕಾರಿಗಳಿಗೆ ಮಾರ್ಚ್ ತಿಂಗಳಲ್ಲೇ ದೂರು ನೀಡಿದ್ದರೂ ಪ್ರಯೋಜನವಾಗಿಲ್ಲ. ಕಾರಣ ಜಿಲ್ಲಾ ಪಂಚಾಯಿತಿ ಅಧಿಕಾರಿಗಳಿಗೆ ದೂರು ನೀಡಿ, ತನಿಖೆ ನಡೆಸಿ ಕಾನೂನು ಕ್ರಮ ತೆಗೆದುಕೊಳ್ಳುವಂತೆ ಮನವಿ ಮಾಡಿಕೊಂಡಿದ್ದೇವೆ’ ಎಂದು ಗ್ರಾಮಸ್ಥರಾದ ಆನಂದ್, ಕೃಷ್ಣ. ಜಿ.ಟಿ., ಚಿಕ್ಕರಾಜು, ಚಂದ್ರಯ್ಯ, ಶಿವಲಿಂಗಯ್ಯ, ಎಂ.ಬಿ.ಬೆಟ್ಟಯ್ಯ ತಿಳಿಸಿದರು.