ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಶಿರಾ: ಕಾಂಗ್ರೆಸ್ ಸಹಾಯವಾಣಿಗೆ ಮೆಚ್ಚುಗೆ

Last Updated 8 ಜೂನ್ 2021, 5:02 IST
ಅಕ್ಷರ ಗಾತ್ರ

ಶಿರಾ: ಕೊರೊನಾ ಸೋಂಕು ಕಡಿಮೆಯಾಗಿರುವುದು ಸಂತಸದ ವಿಷಯ. ಮೂರನೇ ಅಲೆ ಬರದಂತೆ ನೋಡಿಕೊಳ್ಳುವುದು ಪ್ರತಿಯೊಬ್ಬರ ಕರ್ತವ್ಯ ಎಂದು ಕಾಂಗ್ರೆಸ್ ಮುಖಂಡ ಟಿ.ಬಿ.ಜಯಚಂದ್ರ ಹೇಳಿದರು.

ನಗರದ ಮಿನಿ ವಿಧಾನಸೌಧದ ಆವರಣದಲ್ಲಿ ಸೋಮವಾರ ಕಾಂಗ್ರೆಸ್ ಪಕ್ಷದಿಂದ ಹಮ್ಮಿಕೊಂಡಿದ್ದ ಗೃಹ ರಕ್ಷಕ ದಳ (ಹೋಂ ಗಾರ್ಡ್) ಹಾಗೂ ಅಗ್ನಿ ಶಾಮಕ ದಳದ ಸಿಬ್ಬಂದಿಗೆ ದಿನಸಿ ಕಿಟ್, ಫೇಸ್ ಶೀಲ್ಡ್ ಹಾಗೂ ಸ್ಯಾನಿಟೈಸರ್ ವಿತರಿಸಿ ಮಾತನಾಡಿದರು.

ತಾಲ್ಲೂಕಿನಲ್ಲಿ ಕೊರೊನಾ ಪ್ರಕರಣಗಳು ಮತ್ತು ಸಾವಿನ ಸಂಖ್ಯೆ ಹೆಚ್ಚಾಗಿದ್ದು ಇದು ಕೆಂಪು ವಲಯವಾಗಿದೆ. ಸಾರ್ವಜನಿಕ ಆಸ್ಪತ್ರೆಯಲ್ಲಿ ಕೇವಲ 5 ವೆಂಟಿಲೇಟರ್‌ಗಳು ಇದೆ. ಆದರೆ ಜಿಲ್ಲಾಸ್ಪತ್ರೆಯಲ್ಲಿ ವೆಂಟಿಲೇಟರ್‌ಗಳು ಬಳಕೆಯಾಗದೆ ಕೊಳೆಯುತ್ತಿವೆ‌. ಶಿರಾ ಆಸ್ಪತ್ರೆಯಲ್ಲಿ ತಜ್ಞ ವೈದ್ಯರು ಇರುವುದರಿಂದ ವೆಂಟಿಲೇಟರ್‌ಗಳನ್ನು ಶಿರಾ ಆಸ್ಪತ್ರೆಗೆ ತರಲು ಶಾಸಕರು ಮುಂದಾಗಬೇಕು. ಮೂರನೇ ಅಲೆ ಬಂದರು ಸಹ ಅದನ್ನು ನಿಭಾಯಿಸಲು ಸಿದ್ಧತೆ ಮಾಡಿಕೊಳ್ಳಬೇಕುಎಂದರು.

ಕಾಂಗ್ರೆಸ್ ಪಕ್ಷದಿಂದ ಸ್ಥಾಪಿಸಿರುವ ಸಹಾಯವಾಣಿ ಉತ್ತಮವಾಗಿ ಕೆಲಸ ಮಾಡುತ್ತಿದೆ. ಜನತೆಯಿಂದ ಮೆಚ್ಚುಗೆ ವ್ಯಕ್ತವಾಗುತ್ತಿದೆ ಎಂದರು.

ಕ್ರಿಬ್ಕೋ ನಿರ್ದೇಶಕ ಆರ್.ರಾಜೇಂದ್ರ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಪಿ.ಅರ್.ಮಂಜುನಾಥ್, ಬರಗೂರು ನಟರಾಜು, ಕಾನೂನು ಘಟಕದ ಅಧ್ಯಕ್ಷ ಎಚ್.ಗುರುಮೂರ್ತಿ, ಮುಖಂಡ ಸಂಜಯ್ ಜಯಚಂದ್ರ, ಗುಳಿಗೇನಹಳ್ಳಿ ನಾಗರಾಜ್, ಡಿ.ಸಿ.ಆಶೋಕ್, ಪರ್ವತಪ್ಪ, ಜಿ.ಎನ್.ಮೂರ್ತಿ, ಹುಣಸೇಹಳ್ಳಿ ಶಿವಕುಮಾರ್, ಅಜಯ್, ಸುಧಾಕರ್ ಗೌಡ, ದಯಾನಂದಗೌಡ, ರೇಖಾ ರಾಘವೇಂದ್ರ, ಕಲ್ಲುಕೋಟೆ ದೇವರಾಜ್, ಪಂಜಿಗಾನಹಳ್ಳಿ ಅಡಿಕೆ ತಿಪ್ಪೇಸ್ವಾಮಿ, ಚನ್ನನಕುಂಟೆ ತಿಪ್ಪೇಶ್ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT