‘ಜಿಎಸ್ಟಿ, ನೋಟು ಅಮಾನ್ಯೀಕರಣದಿಂದ ಹಲವು ಸಣ್ಣ, ಅತೀ ಸಣ್ಣ ಕೈಗಾರಿಕೆಗಳು ಮುಚ್ಚಿಹೋದವು. ಉದ್ಯಮಗಳಲ್ಲಿ ಉದ್ಯೋಗ ಕಡಿತವಾದವು. ಹೊಸ ಕೈಗಾರಿಕೆಗಳು ಆರಂಭ ಆಗಲೇ ಇಲ್ಲ. ಉದ್ಯೋಗ ಸೃಷ್ಟಿ ಮಾಡಲೂ ಪ್ರಯತ್ನ ಮಾಡಲಿಲ್ಲ. ಎಚ್ಎಎಲ್, ಬಿಎಸ್ಎನ್ಎಲ್, ಎಂಟಿಎನ್ಎಲ್, ಏರ್ ಇಂಡಿಯಾ ಸೇರಿದಂತೆ ಅನೇಕ ಬೃಹತ್ ಕಂಪನಿಗಳು ದಿವಾಳಿಯಾಗಿವೆ. ಕಂಪನಿಗಳಲ್ಲಿ ಸಿಬ್ಬಂದಿ ಕಡಿತ, ಉದ್ಯೋಗಿಗಳು ಸ್ವಯಂ ನಿವೃತ್ತಿ, ಕಡ್ಡಾಯ, ಮುಚ್ಚುವ ಸ್ಥಿತಿ ತಲುಪಲು ಎನ್ಡಿಎ ಸರ್ಕಾರದ ಧೋರಣೆಗಳೇ ಕಾರಣ’ ಎಂದು ಟೀಕಿಸಿದರು.