ಪಾವಗಡ: ಪಟ್ಟಣದಲ್ಲಿ ಕ್ವಾರಂಟೈನ್ನಲ್ಲಿರುವ ತಬ್ಲಿಗಿಗಳ ಬ್ಯಾಗ್ಗಳನ್ನು ವೈ.ಎನ್.ಹೊಸಕೋಟೆಯಲ್ಲಿರುವ ಅವರ ಮನೆಗಳಿಗೆ ವ್ಯಕ್ತಿಯೊಬ್ಬರು ಕಾರ್ನಲ್ಲಿ ತಲುಪಿಸಿದ್ದಾರೆ. ಇದು ಅಲ್ಲಿನ ಜನರನ್ನು ಆತಂಕಕ್ಕೆ ದೂಡಿದೆ.
ಬಾಲಕಿಯೊಬ್ಬಳು ಬ್ಯಾಗ್ ನೋಡಿ ತಂದೆ ಜಮಾತ್ಗೆ ತೆಗೆದುಕೊಂಡು ಹೋಗಿದ್ದ ಬ್ಯಾಗ್ ಇದು ಎಂದು ಸಂಭ್ರಮಿಸಿದ್ದನ್ನು ಗಮನಿಸಿದ ಗ್ರಾಮಸ್ಥರು ಪೊಲೀಸ್ ಹಾಗೂ ಆರೋಗ್ಯ ಇಲಾಖೆ ಅಧಿಕಾರಿಗಳಿಗೆ ಮಾಹಿತಿ ನೀಡಿದ್ದಾರೆ.
ಅಧಿಕಾರಿಗಳು ತಬ್ಲಿಗಿಗಳ ಕುಟುಂಬ ಸದಸ್ಯರನ್ನು ಭೇಟಿ ಮಾಡಿ ಮಾಹಿತಿ ಸಂಗ್ರಹಿಸಿದ್ದಾರೆ. ಬ್ಯಾಗ್ಗಳನ್ನು ತಂದಿದ್ದ ಕಾರ್ ಸ್ವಚ್ಛಗೊಳಿಸಿ ಬ್ಯಾಗ್ ಒಂದನ್ನು ಸುಟ್ಟು ಹಾಕಿಸಿದ್ದಾರೆ. ಸದ್ಯ ಗ್ರಾಮದ 8 ಮಂದಿಯನ್ನು ಹೋಂ ಕ್ವಾರಂಟೈನ್ನಲ್ಲಿ ಇರಿಸಲಾಗಿದೆ ಎಂದು ಅಧಿಕಾರಿಯೊಬ್ಬರು ಮಾಹಿತಿ ನೀಡಿದರು.