ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೊರೊನಾ: ಜಾತ್ರೆ ತಡೆದ ಅಧಿಕಾರಿಗಳು

Last Updated 11 ಏಪ್ರಿಲ್ 2021, 5:26 IST
ಅಕ್ಷರ ಗಾತ್ರ

ಕುಣಿಗಲ್: ಕೊರೊನಾ ಎರಡನೇ ಅಲೆ ಅಬ್ಬರಿಸುತ್ತಿದ್ದರೂ, ತಾಲ್ಲೂಕಿನ ಬಿದರಿಕಟ್ಟೆ ಪಾಳ್ಯದಲ್ಲಿ ಜಾತ್ರೆ ಸಿದ್ಧತೆಯಲ್ಲಿದ್ದ ಗ್ರಾಮಸ್ಥರಲ್ಲಿ ಜಾಗೃತಿ ಮೂಡಿಸಿದ ಅಧಿಕಾರಿಗಳು ಜಾತ್ರೆ ತಡೆದ ಘಟನೆ ಶನಿವಾರ ನಡೆದಿದೆ.

ತಾಲ್ಲೂಕಿನ ಅಮೃತೂರು ಹೋಬಳಿಯ ಸಂಕೇನಪುರ ಬಳಿಯ ಬಿದರಿಕಟ್ಟೆ ಪಾಳ್ಯದಲ್ಲಿ ಶನಿವಾರ ಆರತಿ ಮತ್ತು ಸಾಮೂಹಿಕ ಭೋಜನಾ ವ್ಯವಸ್ಥೆಗೆ ಗ್ರಾಮಸ್ಥರು ಅಣಿಯಾಗುತ್ತಿದ್ದು, ಸುದ್ದಿ ತಿಳಿದ ಪ್ರಭಾರ ತಹಶೀಲ್ದಾರ್ ಕಲ್ಯಾಣಿ ವೆಂಕಟೇಶ್ ಕಾಂಬ್ಲಿ, ಪಿಎಸ್ಐ ವೆಂಕಟೇಶ್, ಕಂದಾಯ ಅಧಿಕಾರಿ ವಿನೋದ್ ಗ್ರಾಮಕ್ಕೆ ಭೇಟಿ ನೀಡಿ ಗ್ರಾಮಸ್ಥರೊಂದಿಗೆ ಚರ್ಚಿಸಿ ಕೊರೊನಾ ಬಗ್ಗೆ ಜಾಗೃತಿ ಮೂಡಿಸಿ, ನಿಷೇದಾಜ್ಞೆ ಜಾರಿಯಿರುವುದರಿಂದ ಹಬ್ಬದ ಆಚರಣೆಗೆ ಅವಕಾಶ ನಿರಾಕರಿಸಿದ ಕಾರಣ ಗ್ರಾಮಸ್ಥರು ತಮ್ಮಮನೆಮಟ್ಟಿಗೆ ಹಬ್ಬ ಆಚರಿಸುವುದಾಗಿ ತಿಳಿಸಿ, ಆರತಿ ಪೂಜೆ ಮತ್ತು ಸಾಮೂಹಿಕ ಭೋಜನ ವ್ಯವಸ್ಥೆ ಕೈಬಿಟ್ಟಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT