ತಾಲ್ಲೂಕಿನ ಅಮೃತೂರು ಹೋಬಳಿಯ ಸಂಕೇನಪುರ ಬಳಿಯ ಬಿದರಿಕಟ್ಟೆ ಪಾಳ್ಯದಲ್ಲಿ ಶನಿವಾರ ಆರತಿ ಮತ್ತು ಸಾಮೂಹಿಕ ಭೋಜನಾ ವ್ಯವಸ್ಥೆಗೆ ಗ್ರಾಮಸ್ಥರು ಅಣಿಯಾಗುತ್ತಿದ್ದು, ಸುದ್ದಿ ತಿಳಿದ ಪ್ರಭಾರ ತಹಶೀಲ್ದಾರ್ ಕಲ್ಯಾಣಿ ವೆಂಕಟೇಶ್ ಕಾಂಬ್ಲಿ, ಪಿಎಸ್ಐ ವೆಂಕಟೇಶ್, ಕಂದಾಯ ಅಧಿಕಾರಿ ವಿನೋದ್ ಗ್ರಾಮಕ್ಕೆ ಭೇಟಿ ನೀಡಿ ಗ್ರಾಮಸ್ಥರೊಂದಿಗೆ ಚರ್ಚಿಸಿ ಕೊರೊನಾ ಬಗ್ಗೆ ಜಾಗೃತಿ ಮೂಡಿಸಿ, ನಿಷೇದಾಜ್ಞೆ ಜಾರಿಯಿರುವುದರಿಂದ ಹಬ್ಬದ ಆಚರಣೆಗೆ ಅವಕಾಶ ನಿರಾಕರಿಸಿದ ಕಾರಣ ಗ್ರಾಮಸ್ಥರು ತಮ್ಮಮನೆಮಟ್ಟಿಗೆ ಹಬ್ಬ ಆಚರಿಸುವುದಾಗಿ ತಿಳಿಸಿ, ಆರತಿ ಪೂಜೆ ಮತ್ತು ಸಾಮೂಹಿಕ ಭೋಜನ ವ್ಯವಸ್ಥೆ ಕೈಬಿಟ್ಟಿದ್ದಾರೆ.