ಮಹಾರಾಷ್ಟ್ರದಿಂದ ಮೇ 14ರಂದು ಕುಣಿಗಲ್ ತಾಲ್ಲೂಕಿನ ಅಮೃತೂರು ಪೊಲೀಸ್ ಠಾಣೆ ವ್ಯಾಪ್ತಿಯ ಮೇಗಲಪಾಳ್ಯಕ್ಕೆ ಮುಂಬೈನಿಂದ ಮೂರು ಜನರು ಬಂದಿದ್ದರು. ಈ ಮೂವರನ್ನು ಕ್ವಾರಂಟೈನ್ ಮಾಡಲಾಗಿತ್ತು. ಅಂದೇ ಇವರ ಮಾದರಿಗಳನ್ನು ಪರೀಕ್ಷೆಗೆ ಕಳುಹಿಸಲಾಗಿದ್ದು ನೆಗೆಟಿವ್ ಬಂದಿದ್ದವು. ಮತ್ತೆ ಮೇ 26ರಂದು ಮಾದರಿಗಳನ್ನು ಪರೀಕ್ಷೆಗೆ ಕಳುಹಿಸಲಾಗಿತ್ತು. ಇವರಲ್ಲಿ 22 ವರ್ಷದ ವ್ಯಕ್ತಿ (ರೋಗಿ 2772)ಗೆ ಸೋಂಕು ಇರುವುದು ದೃಢವಾಗಿದೆ.