ಪಟ್ಟಣದ ನೃಪತುಂಗ ವೃತ್ತದಲ್ಲಿ ಸಿಪಿಐ ಎಂ.ಎಸ್.ಸರ್ದಾರ್ ಅವರು ದ್ವಿಚಕ್ರ ವಾಹನ ಸವಾರರ ಡಿ.ಎಲ್. ಹಾಗೂ ಮಾಸ್ಕ್ ಪರಿಶೀಲಿಸುತ್ತಿದ್ದಾಗ ಈ ಘಟನೆ ನಡೆದಿದೆ. ಸಿಪಿಐ ಕಾಲಿನಿಂದ ಒದ್ದ ತಕ್ಷಣ ವಾಹನ ಸವಾರ ನೆಲಕ್ಕೆ ಬಿದ್ದಿರುವ ದೃಶ್ಯ ವಿಡಿಯೊದಲ್ಲಿದೆ. ಸಿಪಿಐ ವರ್ತನೆಗೆ ಸಾಮಾಜಿಕ ಜಾಲತಾಣಗಳಲ್ಲಿ ತೀವ್ರ ಆಕ್ಷೇಪ ವ್ಯಕ್ತವಾಗಿದೆ.