ಡಿ.9ರಂದು ತಾಲ್ಲೂಕಿನ ಬನ್ನಿಕುಪ್ಪೆ ಗ್ರಾಮಕ್ಕೆ ಸುರೇಶ್ಗೌಡ ಭೇಟಿ ನೀಡಿದ್ದರು. ಅವರ ಮೊಬೈಲ್ಗೆ ಕರೆ ಮಾಡಿದ ಅಪರಿಚಿತ ವ್ಯಕ್ತಿ ನಿಮ್ಮ ಡೆಬಿಟ್ ಕಾರ್ಡು ಸರಿ ಇದೆಯಾ? ಎಂದು ಕೇಳಿ ಡೆಬಿಟ್ ಕಾರ್ಡ್ ಮಾಹಿತಿ ಪಡೆದುಕೊಂಡಿದ್ದಾನೆ. ಅಲ್ಲದೇ, ಮತ್ತೊಮ್ಮೆ ಪರಿಶೀಲನೆ ಮಾಡಿಕೊಳ್ಳಿ ಎಂದೂ ಹೇಳಿದ್ದಾನೆ. ಬಳಿಕ ನಿಮ್ಮ ಮೊಬೈಲ್ಗೆ ‘ಒಟಿಪಿ’ ಸಂಖ್ಯೆ ಬರುತ್ತದೆ ಕೂಡಲೇ ತಿಳಿಸಿ ಎಂದು ಹೇಳಿದ್ದಾನೆ. ಬಳಿಕ ತಾನೇ ಕರೆ ಮಾಡಿ ಒಟಿಪಿ ಸಂಖ್ಯೆ ಪಡೆದಿದ್ದಾನೆ.