‘ಆರೋಪಿ ದಿನೇಶ್ ಬಾರ್ನಲ್ಲಿದ್ದ ಮದ್ಯವನ್ನು ಹೆಚ್ಚಿನ ಬೆಲೆಗೆ ಮಾರಿದ್ದಾರೆ. ಅಬಕಾರಿ ಇಲಾಖೆ ಅಧಿಕಾರಿಗಳು ಪರಿಶೀಲನೆಗೆ ಬರುತ್ತೇವೆ ಎಂದು ದೂರವಾಣಿ ಮೂಲಕ ತಿಳಿಸಿದಾಗ, ರಾತ್ರಿ ವೇಳೆ ಕಳವು ನಡೆದಿರುವ ರೀತಿ ಕಾಣುವ ಹಾಗೆ ಬಾಗಿಲನ್ನು ಮೀಟಿ ಕಥೆ ಸೃಷ್ಟಿಸಿದ್ದಾರೆ’ ಎಂದು ಪೊಲೀಸ್ ವರಿಷ್ಠಾಧಿಕಾರಿ ಜಿ.ಕೆ.ಮಿಥುನ್ ಕುಮಾರ್ ತಿಳಿಸಿದ್ದಾರೆ.