ಕೋಟೆಕ್ ಮಹೇಂದ್ರ ಬ್ಯಾಂಕಿನ ರಿಕವರಿ ಎಕ್ಸಿಕ್ಯುಟೀವ್ ಸಿ.ನಟರಾಜು ಜುಲೈ 15 ರಂದು ಶಿರಾ ತಾಲ್ಲೂಕು ಚಿಕ್ಕದಾಸರಹಳ್ಳಿ ಠಾಣೆಗೆ ಬಂದು, ‘ತಾವು ಸಂಜೆ ಬ್ಯಾಂಕಿನ ರಿಕವರಿ ಬಾಬ್ತು ₹7,53,000 ಹಣವನ್ನು ತಮ್ಮ ಬ್ಯಾಗಿನಲ್ಲಿ ಇಟ್ಟುಕೊಂಡು ಮೋಟಾರ್ ಸೈಕಲ್ನಲ್ಲಿ ಯರಗುಂಟೆ ಗೇಟ್ನಿಂದ ಶಿರಾ ಕಡೆಗೆ ಬರುತ್ತಿರುವಾಗ, ಉಲ್ಲಾಸ್ ತೋಪಿನ ಬಳಿ ಯಾರೋ ಇಬ್ಬರು ಅಪರಿಚಿತರು ಕಣ್ಣಿಗೆ ಖಾರದ ಪುಡಿ ಎರಚಿ, ಕಬ್ಬಿಣದ ಚೈನ್ನಿಂದ ಒಡೆದು ಹಣವನ್ನು ಕಿತ್ತುಕೊಂಡು ಹೋಗಿದ್ದಾರೆ’ ಎಂದು ದೂರು ಸಲ್ಲಿಸಿದ್ದರು.