ವೆಂಕಟಾಪುರ ಶಾಲೆಯಲ್ಲಿ ಶಿಕ್ಷಕಿಯೊಬ್ಬರು ಸುಮಾರು 20 ವರ್ಷಗಳಿಂದ ಒಂದೇ ಶಾಲೆಯಲ್ಲಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಶಾಲಾ ಅಭಿವೃದ್ಧಿ ಸಮಿತಿ ಪದಾಧಿಕಾರಿಗಳ ಮೇಲೆ ಇವರು ದೌರ್ಜನ್ಯ ಎಸಗುತ್ತಿರುವ ಬಗ್ಗೆ ದೂರುಗಳು ಬಂದಿವೆ. ಕೂಡಲೆ ಅವರನ್ನು ಬೇರೆಡೆಗೆ ನಿಯೋಜಿಸಿ. ತುಮಕೂರು, ಬೆಂಗಳೂರಿನಿಂದ ಶಾಲೆಗೆ ಓಡಾಡುವ, ತಡವಾಗಿ ಆಗಮಿಸುವ ಶಿಕ್ಷಕರ ಮೇಲೆ ಕ್ರಮ ತೆಗೆದುಕೊಳ್ಳಿ ಎಂದು ಬಿಇಒ ಅಶ್ವಥನಾರಾಯಣ ಅವರಿಗೆ ಸೂಚಿಸಿದರು.