ಸದಾ ಜನಜಂಗುಳಿಯಿಂದ ಗಿಜಿಗುಡುತ್ತಿದ್ದ ಎಂ.ಜಿ.ರಸ್ತೆ, ಶಿರಾಣಿ ರಸ್ತೆ, ಮಂಡಿಪೇಟೆ, ಗುಬ್ಬಿ ಗೇಟ್, ಸೋಮೇಶ್ವರಂ ಸೇರಿದಂತೆ ಪ್ರಮುಖ ವಾಣಿಜ್ಯ ಪ್ರದೇಶಗಳು ಬಿಕೊ ಎನ್ನುತ್ತಿದ್ದವು. ಕೆಎಸ್ಆರ್ಟಿಸಿ, ಖಾಸಗಿ ಬಸ್ ನಿಲ್ದಾಣಗಳಲ್ಲೂ ಹೆಚ್ಚಿನ ಸಂಖ್ಯೆಯ ಪ್ರಯಾಣಿಕರು ಕಂಡುಬರಲಿಲ್ಲ. ಗುರುವಾರದಿಂದಲೇ ವಾಣಿಜ್ಯ ಚಟುವಟಿಕೆಗಳನ್ನು ಬಂದ್ ಮಾಡಿರುವುದು, ಕೊರೊನಾ ಸೋಂಕಿತರ ಸಂಖ್ಯೆ ಹೆಚ್ಚುತ್ತಿದ್ದು, ಆತಂಕಗೊಂಡಿರುವ ಜನರು ಮನೆಯಿಂದ ಹೊರ ಬರಲಿಲ್ಲ. ಅಗತ್ಯ ಹಾಗೂ ತುರ್ತು ಕೆಲಸ ಇದ್ದವರಷ್ಟೇ ಮನೆಯಿಂದ ಹೊರಗೆ ಬಂದರು.