ಶನಿವಾರ ಮಾಧ್ಯಮದವರೊಂದಿಗೆ ಮಾತನಾಡಿ, ‘ಕಾನೂನು ರೂಪಿಸಿ ನಿರ್ಬಂಧಿಸಲು ಹೊರಟರೆ ಅದರಿಂದ ಜನರಿಗೇ ತೊಂದರೆ ಆಗುತ್ತದೆ. ಕೆಲವು ಕಡೆ ದೇವಸ್ಥಾನದವರು ಪ್ರಸಾದ ವಿತರಿಸುತ್ತಾರೆ. ಮತ್ತೊಂದಿಷ್ಟು ಕಡೆ ಭಕ್ತರು ಪೂಜೆ ಮಾಡಿ ಪ್ರಸಾದ ಹಂಚುತ್ತಾರೆ. ಹೀಗೆ ನಾನಾ ರೀತಿಯ ಪದ್ಧತಿಯನ್ನು ಈ ವ್ಯವಸ್ಥೆಯಲ್ಲಿ ಅನುಸರಿಸಿಕೊಂಡು ಬರಲಾಗಿದೆ. ಹೀಗಾಗಿ ನಿರ್ಬಂಧ ವಿಧಿಸುವುದು ಕಷ್ಟ ಎನ್ನುವುದು ನನ್ನ ಅಭಿಪ್ರಾಯ’ ಎಂದರು.