ಸಮೀಪದ ಬರಕ ಗ್ರಾಮದಲ್ಲಿ ಕರಡಿ ಓಡಾಡುತ್ತಿರುವುದು ರೈತರ ಗಮನಕ್ಕೆ ಬಂದಿತ್ತು. ವಿಷಯವನ್ನು ಕೊರಟಗೆರೆ ತಾಲ್ಲೂಕು ಅರಣ್ಯ ಇಲಾಖೆಯ ಗಮನಕ್ಕೆ ತರಲಾಗಿತ್ತು. 15 ದಿನಗಳ ಹಿಂದೆ ಗ್ರಾಮದ ಶ್ರೀಶೈಲಾ ಹಣ್ಣಿನ ಫಾರಂನಲ್ಲಿ ಬೋನನ್ನು ಇಡಲಾಗಿತ್ತು. ಕರಡಿ ಬೋನಿಗೆ ಬಿದ್ದು, ಕಬ್ಬಿಣದ ಸರಳುಗಳನ್ನು ಬಗ್ಗಿಸಿ ತಪ್ಪಿಸಿಕೊಂಡಿತ್ತು. ಮತ್ತೆ ಅದೇ ಬೋನನ್ನು ದುರಸ್ತಿಪಡಿಸಿ 3 ದಿನಗಳ ಹಿಂದೆ ತಂದು ಇಟ್ಟಿದರು.