ದೇವೇಗೌಡರು ಹಾಗೂ ಜೆಡಿಎಸ್ ನಾಯಕರನ್ನು ಹೀನಾಯವಾಗಿ ಟೀಕಿಸುತ್ತಿದ್ದ ಸಿದ್ದರಾಮಯ್ಯ, ಡಾ. ಪರಮೇಶ್ವರ ಅವರಂತಹ ನಾಯಕರೂ ಈಗ ದೇವೇಗೌಡರನ್ನು ಹಾಡಿ ಹೊಗಳುತ್ತಿದ್ದಾರೆ. ಇವರ ನೈತಿಕತೆ ಎಲ್ಲಿ ಹೋಯಿತು. ದೇವೇಗೌಡರು ಕಣ್ಣಿರು ಹಾಕುತ್ತಾ ಜನರನ್ನು ಮರಳು ಮಾಡುತ್ತಾರೆ. ಜನನಾಯಕ ತಾನು ಕಣ್ಣೀರು ಹಾಕುವುದಲ್ಲ, ಜನರ ಕಣ್ಣೀರು ಒರೆಸುವಂತಿರಬೇಕು ಎಂದರು.