ಉತ್ಸವ ಮುಗಿಸಿದ ದೇವತೆಗಳು ಕೃತಿಕಾ ಮಹೋತ್ಸವಕ್ಕೆ ಆಗಮಿಸುವ ಭಕ್ತರ ಮಹಾಪ್ರಸಾದಕ್ಕೆ ತಯಾರು ಮಾಡಿದ್ದ ಮುದ್ದೆ-ಸಾರು ಮತ್ತು ಅನ್ನ ರಾಶಿಗೆ ಪೂಜೆ ಸಲ್ಲಿಸಿ ಭಕ್ತರಿಕೆ ವಿತರಣೆ ಮಾಡಲಾಯಿತು. ಸರದಿ ಸಾಲಿನಲ್ಲಿ ನಿಂತ ಭಕ್ತರು ನಾಮುಂದು ತಾಮುಂದು ಎಂದು ಮುದ್ದೆ ಸಾರಿನ ರುಚಿ ಸವಿದರು. ಇಲ್ಲಿ ತಯಾರಿಸುವ ಸಾರಿಗೆ ಎಲ್ಲ ತರಹದ ಕಾಳುಗಳನ್ನು ಹಾಕುವುದರಿಂದ ಸಾರು ಬಹಳ ರುಚಿಯಾಗಿರುತ್ತದೆ. ಹುಳಿಯಾರು ಹೋಬಳಿ ಸುತ್ತಮುತ್ತಲ ಗ್ರಾಮಗಳು ಸೇರಿದಂತೆ ಪಕ್ಕದ ಹೊಸದುರ್ಗ, ಅರಸೀಕೆರೆ ತಾಲ್ಲೂಕುಗಳಿಂದಲೂ ಭಕ್ತರು ಬಂದಿದ್ದು ವಿಶೇಷವಾಗಿತ್ತು.