2011ರಿಂದ ಅಂಗವಿಕಲರಿಗೆ ಸೌಕರ್ಯ ಕಲ್ಪಿಸಲು ₹ 5 ಸಾವಿರದಿಂದ ₹ 15 ಸಾವಿರ ಹಣ ವಸೂಲಿ ಮಾಡಿದ್ದಾರೆ. ಸರ್ಕಾರದಿಂದ ದೊರಕುವ ಸಾದನಾ ಸಲಕರಣೆಗಳು, ತ್ರಿಚಕ್ರ ವಾಹನ, ತ್ರಿಚಕ್ರ ಸೈಕಲ್, ಅಂಗವಿಕಲರ ಗುರುತಿನ ಚೀಟಿ ಪುಸ್ತಕ ನೀಡಲು, ವಿದ್ಯಾರ್ಥಿ ವೇತನ ಕೊಡಿಸಲು ಹೀಗೆ ನಾನಾ ರೀತಿಯ ಸೌಲಭ್ಯ ಕಲ್ಪಿಸುವಾಗ ಹಣ ಪಡೆದು ಭ್ರಷ್ಟಾಚಾರ ವೆಸಗಿದ್ದಾರೆ ಎಂದು ಆರೋಪಿಸಿದರು.