‘ಕೊಡಿಗೇನಹಳ್ಳಿ ಗ್ರಾಮದ ನಾಗಪ್ಪ ಬಿನ್ ರುದ್ರಪ್ಪ ಹೆಸರಲ್ಲಿ ಸರ್ಕಾರದಿಂದ ನಿವೇಶನ ನೀಡಿದ್ದರು. ಆದರೆ, ಹಲವಾರು ವರ್ಷ ಕಳೆದರೂ ಗ್ರಾಮ ಪಂಚಾಯಿತಿಯವರು ನಮ್ಮ ನಿವೇಶನದ ಜಾಗ ತೋರಿಸುತ್ತಿಲ್ಲ. ಮನೆ ನಿರ್ಮಿಸಿಕೊಳ್ಳಬೇಕು ಜಾಗ ತೋರಿಸಿ ಎಂದರೆ ‘ನಿಮ್ಮ ಸೈಟಿಲ್ಲ’ ಎನ್ನುತ್ತಾರೆ ಪಂಚಾಯಿತಿಯವರು. ಮತ್ತೆ ಖಾತೆ, ಹಕ್ಕುಪತ್ರ ಮತ್ತು ಕಂದಾಯ ಕಟ್ಟಿರುವ ರಸೀದಿಗಳು ಹೇಗೆ ಬಂದವು. ಪಂಚಾಯಿತಿಯಿಂದ ಕಂದಾಯ ಹೇಗೆ ಕಟ್ಟಿಸಿಕೊಂಡರು’ ಎಂದು ನಾಗಪ್ಪ ಅವರ ಪತ್ನಿ ಶಾಂತಮ್ಮ ಅಧಿಕಾರಿಗಳ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.