<p><strong>ತಿಪಟೂರು:</strong> ನಗರದ ಶಿವಕುಮಾರ ಸ್ವಾಮೀಜಿ ವೃತ್ತದಲ್ಲಿರುವ ಪಶುಪಾಲನಾ ಮತ್ತು ಪಶುವೈದ್ಯಕೀಯ ಸೇವಾ ಇಲಾಖೆಯಿಂದ 38 ರೈತ ಮಹಿಳೆಯರಿಗೆ ಶಾಸಕ ಕೆ.ಷಡಕ್ಷರಿ ಕೋಳಿ ಮರಿಗಳನ್ನು ವಿತರಿಸಿದರು.</p>.<p>ನಂತರ ಮಾತನಾಡಿದ ಅವರು, ಸರ್ಕಾರ ರೈತರನ್ನು ಆರ್ಥಿಕವಾಗಿ ಸದೃಢರನ್ನಾಗಿ ಮಾಡಲು ಹಲವು ಯೋಜನೆಗಳನ್ನು ಜಾರಿಗೆ ತಂದಿದೆ. ಅದರಂತೆ ಅವುಗಳನ್ನು ಸದ್ಬಳಕೆ ಮಾಡಿಕೊಂಡಾಗ ಉನ್ನತಿ ಹೊಂದಲು ಸಾಧ್ಯವಾಗುತ್ತದೆ ಎಂದರು.</p>.<p>ಹಿಂದಿನ ಸರ್ಕಾರದಲ್ಲಿ ಕುರಿ ಹಾಗೂ ಜಾನುವಾರುಗಳು ಮರಣ ಹೊಂದಿದರೆ ಕನಿಷ್ಠ ಪರಿಹಾರ ನೀಡಲಾಗುತ್ತಿತ್ತು. ಕುರಿ, ಮೇಕೆ ಸತ್ತರೆ ₹7,500, ಹಸು ಎಮ್ಮೆ ಮರಣ ಹೊಂದಿದರೆ ₹15,000 ಪರಿಹಾರ ನೀಡಲಾಗುತ್ತಿದೆ. ಗ್ರಾಮಾಂತರ ಪ್ರದೇಶಗಳಲ್ಲಿ ಜಾನುವಾರು ಸಂಖ್ಯೆ ಕಡಿಮೆಯಾಗುತ್ತಿದೆ. ಇದರ ಹೆಚ್ಚಳಕ್ಕೆ ಕೆಲಸ ಮಾಡಬೇಕಿದೆ. ಜಾನುವಾರುಗಳಿಗೆ ಮೀಸಲಿರುವ ಗೋಮಾಳ ಪ್ರದೇಶವನ್ನು ಹಿಂದೆ ಬಗುರ್ ಹುಕಂ ಯೋಜನೆಯಲ್ಲಿ ನೀಡಲಾಗುತ್ತಿತ್ತು. ಆದರೆ ಯಾವುದೇ ಕಾರಣಕ್ಕೂ ಗೋಮಾಳ ಜಾಗಗಳನ್ನು ನೀಡಲಾಗುವುದಿಲ್ಲ ಎಂದರು.</p>.<p>ಸಹಾಯಕ ನಿರ್ದೇಶಕ ನಂದೀಶ್, ಪಶು ವೈದ್ಯಾಧಿಕಾರಿ ಬಾನುಪ್ರಕಾಶ್, ರಂಜಿತಾ, ಬಳವನೇರಲು ಆಸ್ವತ್ರೆ ಹಿರಿಯ ಪಶು ವ್ಯೆಧ್ಯಕೀಯ ಪರೀಕ್ಷಕ ನಾಗರಾಜು, ಅಭಿಷೇಕ್, ಮಂಜುನಾಥ್ ಹಾಜರಿದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ತಿಪಟೂರು:</strong> ನಗರದ ಶಿವಕುಮಾರ ಸ್ವಾಮೀಜಿ ವೃತ್ತದಲ್ಲಿರುವ ಪಶುಪಾಲನಾ ಮತ್ತು ಪಶುವೈದ್ಯಕೀಯ ಸೇವಾ ಇಲಾಖೆಯಿಂದ 38 ರೈತ ಮಹಿಳೆಯರಿಗೆ ಶಾಸಕ ಕೆ.ಷಡಕ್ಷರಿ ಕೋಳಿ ಮರಿಗಳನ್ನು ವಿತರಿಸಿದರು.</p>.<p>ನಂತರ ಮಾತನಾಡಿದ ಅವರು, ಸರ್ಕಾರ ರೈತರನ್ನು ಆರ್ಥಿಕವಾಗಿ ಸದೃಢರನ್ನಾಗಿ ಮಾಡಲು ಹಲವು ಯೋಜನೆಗಳನ್ನು ಜಾರಿಗೆ ತಂದಿದೆ. ಅದರಂತೆ ಅವುಗಳನ್ನು ಸದ್ಬಳಕೆ ಮಾಡಿಕೊಂಡಾಗ ಉನ್ನತಿ ಹೊಂದಲು ಸಾಧ್ಯವಾಗುತ್ತದೆ ಎಂದರು.</p>.<p>ಹಿಂದಿನ ಸರ್ಕಾರದಲ್ಲಿ ಕುರಿ ಹಾಗೂ ಜಾನುವಾರುಗಳು ಮರಣ ಹೊಂದಿದರೆ ಕನಿಷ್ಠ ಪರಿಹಾರ ನೀಡಲಾಗುತ್ತಿತ್ತು. ಕುರಿ, ಮೇಕೆ ಸತ್ತರೆ ₹7,500, ಹಸು ಎಮ್ಮೆ ಮರಣ ಹೊಂದಿದರೆ ₹15,000 ಪರಿಹಾರ ನೀಡಲಾಗುತ್ತಿದೆ. ಗ್ರಾಮಾಂತರ ಪ್ರದೇಶಗಳಲ್ಲಿ ಜಾನುವಾರು ಸಂಖ್ಯೆ ಕಡಿಮೆಯಾಗುತ್ತಿದೆ. ಇದರ ಹೆಚ್ಚಳಕ್ಕೆ ಕೆಲಸ ಮಾಡಬೇಕಿದೆ. ಜಾನುವಾರುಗಳಿಗೆ ಮೀಸಲಿರುವ ಗೋಮಾಳ ಪ್ರದೇಶವನ್ನು ಹಿಂದೆ ಬಗುರ್ ಹುಕಂ ಯೋಜನೆಯಲ್ಲಿ ನೀಡಲಾಗುತ್ತಿತ್ತು. ಆದರೆ ಯಾವುದೇ ಕಾರಣಕ್ಕೂ ಗೋಮಾಳ ಜಾಗಗಳನ್ನು ನೀಡಲಾಗುವುದಿಲ್ಲ ಎಂದರು.</p>.<p>ಸಹಾಯಕ ನಿರ್ದೇಶಕ ನಂದೀಶ್, ಪಶು ವೈದ್ಯಾಧಿಕಾರಿ ಬಾನುಪ್ರಕಾಶ್, ರಂಜಿತಾ, ಬಳವನೇರಲು ಆಸ್ವತ್ರೆ ಹಿರಿಯ ಪಶು ವ್ಯೆಧ್ಯಕೀಯ ಪರೀಕ್ಷಕ ನಾಗರಾಜು, ಅಭಿಷೇಕ್, ಮಂಜುನಾಥ್ ಹಾಜರಿದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>