ತಾಲ್ಲೂಕಿನ ಸೊಬಾಗನಹಳ್ಳಿ ನಂಜಮ್ಮ ಕಾರಣಾಂತರಗಳಿಂದ ಮನೆ ತೊರೆದಿದ್ದು, ಹಲವಾರು ದಿನಗಳಿಂದ ಸಾರ್ವಜನಿಕ ಆಸ್ಪತ್ರೆಯ ವಾಹನಗಳ ತಂಗುದಾಣದಲ್ಲಿ ಆಶ್ರಯ ಪಡೆದಿದ್ದರು. ಭಾನುವಾರ ಬೆಳಗಿನ ಜಾವ ನಂಜಮ್ಮನ ಮೇಲೆ ನಾಯಿಗಳು ದಾಳಿ ಮಾಡಿ ಕಚ್ಚಿವೆ. ವೃದ್ಧೆ ಚೀರಾಡುತ್ತಿದ್ದುದನ್ನು ಕಂಡ ಸಮೀಪದ ಚಹ ಅಂಗಡಿ ಮಾಲೀಕ ವೃದ್ಧೆಯನ್ನು ರಕ್ಷಿಸಿದ್ದಾರೆ. ನಂತರ ದಲಿತ ಮುಖಂಡ ದಲಿತ್ ನಾರಾಯಣ್ ಚಿಕಿತ್ಸೆಗಾಗಿ ಆಸ್ಪತ್ರೆಗೆ ದಾಖಲಿಸಿ ಸಂಬಂಧಿಗಳಿಗೆ ಮಾಹಿತಿ ನೀಡಿದರು.