ಅಧಿಕಾರಿಗಳ ಮಾತಿಗೆ ಏಜೆನ್ಸಿಯವರು ಸ್ಪಂದಿಸದ ಕಾರಣ ತಾಲ್ಲೂಕಿನ ಹಲವೆಡೆ ನೀರಿನ ಘಟಕಗಳು ದುರಸ್ತಿಯಾಗದೆ ಉಳಿಯುತ್ತಿವೆ. ಗ್ರಾಮ ಪಂಚಾಯಿತಿ, ತಾಲ್ಲೂಕು ಪಂಚಾಯಿತಿ, ಗ್ರಾಮೀಣ ಕುಡಿಯುವ ನೀರು ಸರಬರಾಜು ಇಲಾಖೆ ಸೇರಿದಂತೆ ಹಲವೆಡೆ ದೂರು ನೀಡಿದರೂ, ಪ್ರಯೋಜನವಾಗಿಲ್ಲ. ಅಧಿಕಾರಿಗಳು ಏಜೆನ್ಸಿಯವರ ಕಡೆ ಬೊಟ್ಟು ಮಾಡುತ್ತಾರೆ. ಘಟಕಗಳು ದುರಸ್ತಿಯಾಗದೆ ತುಕ್ಕು ಹಿಡಿಯುತ್ತಿವೆ. ಕೆಲವೆಡೆ ಗಿಡ, ಗಂಟಿಗಳು ಬೆಳೆದಿವೆ ಎಂದು ಸಾರ್ವಜನಿಕರು ಆರೋಪಿಸಿದ್ದಾರೆ.