ಶಾಶ್ವತ ನೀರಾವರಿ ಪರಿಹಾರ: ‘ತಾಲ್ಲೂಕಿನಲ್ಲಿ ಅಂತರ್ಜಲ ಕುಸಿದಿದ್ದು, ಶಾಶ್ವತ ನೀರಾವರಿಯೊಂದೇ ಪರಿಹಾರವಾಗಿದೆ. ಈಗಾಗಲೇ ಹೇಮಾವತಿ ಹಾಗೂ ಭದ್ರಾ ಮೇಲ್ದಂಡೆ ನೀರಾವರಿ ಯೋಜನೆಯ ಕಾಮಗಾರಿಗಳು ಪ್ರಗತಿಯಲ್ಲಿವೆ. ಹೇಮಾವತಿಯಿಂದ ಬೋರನಕಣಿ, ಭದ್ರಾ ಮೇಲ್ದಂಡೆ ಯೋಜನೆಯಿಂದ ವಾಣಿ ವಿಲಾಸ ಜಲಾಶಯಗಳು ತುಂಬಿದರೆ ಈ ಭಾಗದ ಅಂತರ್ಜಲಮಟ್ಟ ಏರುತ್ತದೆ. ಆಗ ಮಾತ್ರ ತೆಂಗು ಬೆಳೆಗಾರರ ಉಳಿಸಲು ಸಾಧ್ಯ’ ಎನ್ನುತ್ತಾರೆ ಸಾಮಾಜಿಕ ಹೋರಾಟಗಾರ ದಬ್ಬಗುಂಟೆ ರವಿಕುಮಾರ್.