ಕೇಂದ್ರ ಸರ್ಕಾರದ ನಿಗದಿತ ಅವಧಿಯ ಕಾರ್ಮಿಕರ ನೇಮಕಾತಿ ಮಾಡಿಕೊಂಡರೆ ಕಾರ್ಮಿಕರು ಇಎಸ್ಐ, ಪಿಎಫ್ ಹಾಗೂ ಕಾರ್ಖಾನೆಗಳ ಕೆಲವು ಯೋಜನೆಗಳಿಂದ ವಂಚಿತರಾಗುತ್ತಾರೆ. ನಿವೃತ್ತಿ ಅಂಚಿಗೆ ಬಂದಾಗ ಬೀದಿಗೆ ಬೀಳಬೇಕಾಗುತ್ತದೆ. ಪ್ರಧಾನಿ ನರೇಂದ್ರ ಮೋದಿ ಕಾಯಂ ದುಡಿಮೆ, ಕಾರ್ಮಿಕರ ರಕ್ಷಣೆ, ಕನಿಷ್ಠ ವೇತನ ಹಾಗೂ ಕಾರ್ಮಿಕ ಅಭಿವೃದ್ಧಿಗಾಗಿ ಯೋಜನೆ ರೂಪಿಸಬೇಕು. ಕಾರ್ಮಿಕರ ಕ್ಷೇಮಾಭಿವೃದ್ಧಿ ದೃಷ್ಟಿಯಲ್ಲಿ ಇಟ್ಟುಕೊಂಡು ನಿಗದಿತ ಅವಧಿಯ ಕಾರ್ಮಿಕರ ನೇಮಕಾತಿ ಆದೇಶವನ್ನು ರದ್ದು ಮಾಡಬೇಕು ಎಂದು ಒತ್ತಾಯಿಸಿದರು.