ಮಂಗಳವಾರ, 16 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಿಜೆಪಿ ಪರ ಹಂಚಲು ತಂದಿದ್ದ ಹಣ ವಶ

Last Updated 18 ಏಪ್ರಿಲ್ 2019, 11:06 IST
ಅಕ್ಷರ ಗಾತ್ರ

ಕೊಡಿಗೇನಹಳ್ಳಿ: ಮತದಾರರಿಗೆ ಹಂಚಲು ತಂದಿದ್ದ ₹ 5.49 ಲಕ್ಷವನ್ನು ಗಿಡ್ಡಯ್ಯನಪಾಳ್ಯದ ಸಮೀಪ ಗಸ್ತಿನಲ್ಲಿದ್ದ ಪೊಲೀಸರು ಮಧ್ಯರಾತ್ರಿ ವಶಪಡಿಸಿಕೊಂಡಿದ್ದಾರೆ.

ಪುರವರ ಹೋಬಳಿಯ ಗಿಡ್ಡಯ್ಯನಪಾಳ್ಯದ ಸಮೀಪ ಬುಧವಾರ ರಾತ್ರಿ ಬರುತಿದ್ದ ಕಾರೊಂದನ್ನು ತಡೆದು ಪೊಲೀಸರು ತಪಾಸಣೆ ನಡೆಸಿದಾಗ 500 ಮುಖಬೆಲೆಯ 11 ಕಟ್ಟುಗಳು ದೊರೆತಿವೆ.

ಬಿಜೆಪಿ ಅಭ್ಯರ್ಥಿ ಜಿ.ಎಸ್‌.ಬಸವರಾಜ್‌ ಅವರ ಒಡೆತನಕ್ಕೆ ಸೇರಿದ್ದ ಗುಬ್ಬಿ ಸಿಐಟಿ ಕಾಲೇಜಿನ ಗುಮಾಸ್ಥ ರಾಜು ಎಂಬುವವರು ಕಾರಿನಲ್ಲಿದ್ದರು. ಅವರು ಬಿಜೆಪಿ ಪರ ಬಂದಿದ್ದರು ಎಂದು ತಿಳಿದು ಬಂದಿದೆ. ಕೊಡಿಗೇನಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT