ಗುಬ್ಬಿ ಪಟ್ಟಣದ ನಿವಾಸಿ, ಇದೇ ತಾಲ್ಲೂಕಿನಲ್ಲಿ ಶಿಕ್ಷಕರಾಗಿರುವ ಎಚ್.ಎನ್.ದೇವರಾಜು ಚುನಾವಣಾ ಕರ್ತವ್ಯಕ್ಕಾಗಿ ಚಿತ್ರದುರ್ಗ ಲೋಕಸಭಾ ಕ್ಷೇತ್ರಕ್ಕೆ (ಶಿರಾ) ಗುಬ್ಬಿಯಿಂದ ನೇಮಕಗೊಂಡಿದ್ದರು. ಇಲ್ಲಿಗೆ ಕರ್ತವ್ಯಕ್ಕೆ ತೆರಳುವ ಮುನ್ನ ಅಂಚೆ ಮತಕ್ಕಾಗಿ ಅರ್ಜಿ ಹಾಕಿದ್ದರು. ಆದರೆ, ಅಂಚೆ ಮತ ಪತ್ರಕ್ಕೆ (ಪೋಸ್ಟಲ್ ಬ್ಯಾಲೆಟ್) ಬದಲು ಚುನಾವಣಾ ಕರ್ತವ್ಯ ಪ್ರಮಾಣ ಪತ್ರವನ್ನು (ಇಡಿಸಿ) ಅಂಚೆ ಮೂಲಕ ಕಳುಹಿಸಿದ್ದಾರೆ.