ಮುತ್ತಪ್ಪ ಅವರ ಕೈ, ಕಾಲು ಮೂಳೆಗಳು ಮುರಿದಿವೆ. ಎದೆ, ಹೊಟ್ಟೆ, ಸೊಂಟದ ಭಾಗಕ್ಕೂ ಪೆಟ್ಟಾಗಿದೆ. ಸದ್ಯ ತುರ್ತು ನಿಗಾ ಘಟಕದಲ್ಲಿ(ಐಸಿಯು) ಅವರಿಗೆ ಕೃತಕ ಉಸಿರಾಟದ ವ್ಯವಸ್ಥೆ ಮಾಡಲಾಗಿದೆ ಎಂದು ಆಸ್ಪತ್ರೆಯ ಸ್ಟಾಫ್ ನರ್ಸ್ ವಿಜಯಾ ಅವರು ಪ್ರಜಾವಾಣಿಗೆ ಮಾಹಿತಿ ನೀಡಿದರು.ಮುತ್ತಪ್ಪ ಅವರಿಗೆ ವೈದ್ಯರಾದ ಡಾ.ತ್ಯಾಗರಾಜ್, ಡಾ.ಪ್ರವೀಣ್ ಅವರು ಚಿಕಿತ್ಸೆ ನೀಡುತ್ತಿದ್ದಾರೆ.