ತಾಲ್ಲೂಕಿನ ಕಡಬ ಹೋಬಳಿ ಅಳ್ಳೇನಹಳ್ಳಿಯ ಜೆ.ಗೀತಾ, ಯಲಚಿಹಳ್ಳಿ ಗ್ರಾಮದ ವೈ.ಆರ್.ಯತೀಶ್ ಇಬ್ಬರು ಸೇರಿ ಸುತ್ತಮುತ್ತಲಿನ ಗ್ರಾಮಗಳಾದ ಕೆ.ಮತ್ತಿಘಟ್ಟ, ದಾಸರಕಲ್ಲಹಳ್ಳಿ ದ್ಯಾವಣ್ಣನಪಾಳ್ಯ, ಬೋಚಿಹಳ್ಳಿ, ಕಡೇಕೋಡಿ, ಕೋಡಿಹಟ್ಟಿ, ಜೀಗನಹಳ್ಳಿ ಗೊಲ್ಲರಹಟ್ಟಿ ಶಾಲೆಗಳಿಗೆ ವಾರಕ್ಕೊಮ್ಮೆ ಭೇಟಿ ನೀಡಿ ಶಾಲಾ ಮಕ್ಕಳಿಗೆ ಶ್ರಮದಾನದ ಪಾಠ ಹೇಳುತ್ತಿದ್ದಾರೆ.